ADVERTISEMENT

ಮನಸೂರ ಟ್ರಸ್ಟ್: ಸಂಗೀತಗಾರ ವಿದ್ಯಾಧರ ವ್ಯಾಸ್‌ಗೆ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 13:59 IST
Last Updated 22 ಡಿಸೆಂಬರ್ 2023, 13:59 IST
<div class="paragraphs"><p>ವಿದ್ಯಾಧರ ವ್ಯಾಸ್‌,&nbsp;ರವಿಕಿರಣ ನಾಕೋಡ,&nbsp;ವೆಂಕಟೇಶ ಆಲಕೋಡ</p></div>

ವಿದ್ಯಾಧರ ವ್ಯಾಸ್‌, ರವಿಕಿರಣ ನಾಕೋಡ, ವೆಂಕಟೇಶ ಆಲಕೋಡ

   

ಧಾರವಾಡ: ನಗರದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಪುಣೆಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ವಿದ್ಯಾಧರ ವ್ಯಾಸ್ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿಗೆ ಧಾರವಾಡದ ವಾದ್ಯ ಸಂಗೀತಗಾರ ರವಿಕಿರಣ ನಾಕೋಡ, ಗದಗದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ವೆಂಕಟೇಶ ಆಲಕೋಡ ಆಯ್ಕೆಯಾಗಿದ್ಧಾರೆ.

ರಾಷ್ಟ್ರೀಯ ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಫಲಕ, ಯುವಪ್ರಶಸ್ತಿಯು ₹ 25 ಸಾವಿರ ನಗದು, ಫಲಕ ಒಳಗೊಂಡಿದೆ.

ADVERTISEMENT

ಡಿಸೆಂಬರ್‌ 31ರಂದು ಧಾರವಾಡದ ಆಲೂರು ವೆಂಕಟರಾವ್‌ ಭವನದಲ್ಲಿ ಸಂಜೆ 5.30ಕ್ಕೆ ಜರುಗಲಿರುವ ಮಲ್ಲಿಕಾರ್ಜುನ ಮನಸೂರ ಅವರ 113ನೇ ಜನ್ಮದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.