ಚಿತ್ರದುರ್ಗ: 7ನೇ ಆರೋಪಿ ಅನು ಅಲಿಯಾಸ್ ಅನುಕುಮಾರ್ ಪೊಲೀಸ್ ವಶಕ್ಕೆ ಒಪ್ಪಿಸಿದ ಸುದ್ದಿ ತಿಳಿದ ಬೆನ್ನಲ್ಲೇ ಆತನ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ವಿಷಯ ತಿಳಿದ ಚಂದ್ರಣ್ಣ ನೊಂದುಕೊಂಡಿದ್ದರು. ಶುಕ್ರವಾರ ಮಗನ ಶರಣಾಗತಿ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದರು. ‘ನನ್ನ ಮಗ ಕೊಲೆಗಾರನಲ್ಲ‘ ಎಂದು ಕಣ್ಣೀರು ಹಾಕಿದ್ದರು. ನಗರದ ಸಿಹಿನೀರು ಹೊಂಡ ಬಳಿಯ ತಮ್ಮ ನಿವಾಸದಲ್ಲಿ ಚಂದ್ರಣ್ಣ ನಿಧನರಾದರು.ರೇಣುಕಸ್ವಾಮಿ ಕೊಲೆ ಪ್ರಕರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.