ADVERTISEMENT

ಯೋಗೀಶ್‌ ಗೌಡರ್ ಕೊಲೆ ಪ್ರಕರಣ: ‘ವಿನಯ ಕುಲಕರ್ಣಿ ಜೊತೆ ಗಲಾಟೆ ನಡೆದಿತ್ತು...’

ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:00 IST
Last Updated 3 ಅಕ್ಟೋಬರ್ 2024, 16:00 IST
<div class="paragraphs"><p>ವಿನಯ ಕುಲಕರ್ಣಿ</p></div>

ವಿನಯ ಕುಲಕರ್ಣಿ

   

ಬೆಂಗಳೂರು: ‘ವಿನಯ ಕುಲಕರ್ಣಿ ಮತ್ತು ನನ್ನ ತಮ್ಮ ಯೋಗಿಶ್‌ ಗೌಡರ್‌ ನಡುವೆ ಒಂದು ಬಾರಿ ಜಿಲ್ಲಾ ಪಂಚಾಯಿತಿ ಮೀಟಿಂಗ್‌ನಲ್ಲಿ ಗಲಾಟೆ ನಡೆದಿತ್ತು. ತದನಂತರದ ದಿನಗಳಲ್ಲಿ ನನ್ನ ತಮ್ಮನ ಕೊಲೆಯಾಯ್ತು’ ಎಂದು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ, ಮೃತರ ಅಣ್ಣ ಗುರುನಾಥ ಗೌಡ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದರು.

ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು, ‘ಶಾಸಕರು‍–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಾಲಯದ (ಸಿಸಿಎಚ್‌–82) ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಇದೇ 1ರಿಂದ ಪುನರಾರಂಭಿಸಿದ್ದಾರೆ. ಈತನಕ ಗುರುನಾಥ ಗೌಡ ಭಾಗಶಃ ಸಾಕ್ಷಿ ನುಡಿದಿದ್ದು, ವಿಚಾರಣೆಯನ್ನು ಶುಕ್ರವಾರಕ್ಕೆ (ಅ.4) ಮುಂದೂಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.