ಕಠ್ಮಂಡು: ಅಕ್ರಮವಾಗಿ ₹20 ಲಕ್ಷ ನಗದನ್ನು ಕೊಂಡೊಯ್ಯುತ್ತಿದ್ದ ಭಾರತೀಯರಿಬ್ಬರನ್ನು ನೇಪಾಳ ಪೊಲೀಸರು ಕಪಿಲವಸ್ತು ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಲ್ಮಾನ್ ಖುರೇಸಿಯ (33) ಹಾಗೂ ಉಮೇಶ್ ಸಖರಾಮ್ ಖಂಡಗ್ಲೆ ಬಂಧಿತರು.
ಇವರಿಬ್ಬರು ಭಾರತೀಯ ನಂಬರ್ ಪ್ಲೇಟ್ ಹೊಂದಿದ್ದ ಪ್ರತ್ಯೇಕ ವಾಹನಗಳಲ್ಲಿ ಚಲಿಸುತ್ತಿದ್ದಾಗ, ನೇಪಾಳ–ಭಾರತ ಗಡಿಯಲ್ಲಿ ಭದ್ರತಾ ತಪಾಸಣೆ ವೇಳೆ ಕೃಷ್ಣನಗರದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಯಾವುದೇ ದಾಖಲೆಗಳಿಲ್ಲದ ₹20.50 ಲಕ್ಷವನ್ನು ಬಂಧಿತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೂಕ್ತ ದಾಖಲೆಗಳಿಲ್ಲದೆ ₹25 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಸಾಗಿಸುವುದು ನೇಪಾಳದಲ್ಲಿ ಕಾನೂನುಬಾಹಿರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.