ADVERTISEMENT

ನಸ್ರಲ್ಲಾ ಹತ್ಯೆ ಬಲಿದಾನದ ಕಿಚ್ಚನ್ನು ಹೆಚ್ಚಿಸಿದೆ: ಹುತಿ ಬಂಡುಕೋರರು

ಏಜೆನ್ಸೀಸ್
Published 28 ಸೆಪ್ಟೆಂಬರ್ 2024, 16:08 IST
Last Updated 28 ಸೆಪ್ಟೆಂಬರ್ 2024, 16:08 IST
<div class="paragraphs"><p>ಹಸನ ನಸ್ರಲ್ಲಾ</p></div>

ಹಸನ ನಸ್ರಲ್ಲಾ

   

– ರಾಯಿಟರ್ಸ್ ಚಿತ್ರ

ಸನಾ (ಯೆಮನ್): ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯು ‘ಇಸ್ರೇಲಿ ಶತ್ರುಗಳನ್ನು’ ಎದುರಿಸುವ ದೃಢ ನಿಶ್ಚಯಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಯೆಮನ್ ಮೂಲದ ಹುತಿ ಬಂಡುಕೋರರು ತಿಳಿಸಿದ್ದಾರೆ.

ADVERTISEMENT

‘ಹಸನ್ ನಸ್ರಲ್ಲಾ ಅವರ ಹುತಾತ್ಮತೆಯು ಬಲಿದಾನದ ಕಿಚ್ಚು, ಉತ್ಸಾಹದ ಬಿಸಿ, ಸಂಕಲ್ಪದ ಶಕ್ತಿಯನ್ನು ಹೆಚ್ಚಿಸಲಿದೆ’ ಎಂದು ಇರಾನ್ ಬೆಂಬಲಿತ ಹುತಿ ಬಂಡುಕೋರರು ಬಿಡುಗಡೆ ಮಾಡಿದ ‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಇಸ್ರೇಲ್ ಅನ್ನು ಅಂತ್ಯಗೊಳಿಸುವುದಾಗಿ ಪ್ರತಿಜ್ಞೆಯನ್ನೂ ಮಾಡಿದೆ.

ನಸ್ರಲ್ಲಾ ಸಾವಿಗೆ ಹುತಿ ಶೋಕ ವ್ಯಕ್ತಪಡಿಸಿದೆ.

ಲೆಬನಾನ್‌ನಲ್ಲಿರುವ ಎಲ್ಲಾ ಬೆಂಬಲಿತ ಮುಜಾಹಿದೀನ್ ಸಹೋದರರ ಜಿಹಾದಿ ಸ್ಪೂರ್ತಿ ಮತ್ತಷ್ಟು ಬಲಿಷ್ಠವಾಗಿ ಹಾಗೂ ದೊಡ್ಡದಾಗಿ ಬೆಳೆಯುತ್ತದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.