ADVERTISEMENT

ಭಾರಿ ಹಿಂಸಾಚಾರದ ಬಳಿಕ ಸಹಜ ಸ್ಥಿತಿಗೆ ಬಾಂಗ್ಲಾ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 14:20 IST
Last Updated 25 ಆಗಸ್ಟ್ 2024, 14:20 IST
ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮೆಟ್ರೊ ಸೇವೆ ಭಾನುವಾರ ಪುನಾರಂಭಗೊಂಡಿತು – ಚಿತ್ರ ಎಎಫ್‌ಪಿ 
ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮೆಟ್ರೊ ಸೇವೆ ಭಾನುವಾರ ಪುನಾರಂಭಗೊಂಡಿತು – ಚಿತ್ರ ಎಎಫ್‌ಪಿ    

ಢಾಕಾ : ಇತ್ತೀಚೆಗೆ ಭಾರಿ ಹಿಂಸಾಚಾರ ನಡೆದ ಬಾಂಗ್ಲಾದೇಶದಲ್ಲಿ ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ದೇಶದಲ್ಲಿ ಮೆಟ್ರೊ, ಬಸ್‌, ಟ್ಯಾಕ್ಸಿಗಳಂತಹ ಸೇವೆಗಳು ಪುನರಾರಂಭಗೊಂಡಿವೆ. ದೇಶದಾದ್ಯಂತ ವ್ಯಾಪಾರ– ವಹಿವಾಟುಗಳು ಪುನಾರಂಭಗೊಳ್ಳುತ್ತಿವೆ. ರಾಜಧಾನಿ ಢಾಕಾದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲವಾದರೂ ನಿಧಾನವಾಗಿ ಸುಧಾರಿಸುತ್ತಿದೆ.  

ಸರ್ಕಾರಿ ನೇಮಕಾತಿಯಲ್ಲಿನ ಮೀಸಲಾತಿ ವಿರೋಧಿಸಿ ಸರ್ಕಾರದ ವಿರುದ್ಧ ಬಾಂಗ್ಲಾದಾದ್ಯಂತ ಯುವಕರು ಮತ್ತು ವಿದ್ಯಾರ್ಥಿಗಳು  ಪ್ರಾರಂಭಿಸಿದ ಪ್ರತಿಭಟನೆಯು ತೀವ್ರ ಹಿಂಸಾಚಾರಕ್ಕೆ ತಿರುಗಿತು. ಇದರಿಂದಾಗಿ ಆ.5ರಂದು ಮಾಜಿ ಪ್ರಧಾನಿ ಶೇಕ್‌ ಹಸೀನಾ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಗೈದರು.

ADVERTISEMENT

ನಂತರ ಆ.8ರಂದು ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಹಿಂಸಾಚಾರದಲ್ಲಿ 560ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.