ADVERTISEMENT

ಭಾರತದ ಹೈಕಮಿಷನರ್ ಸಂತೋಷ್‌ ಝಾ–ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಭೇಟಿ

ಪಿಟಿಐ
Published 2 ಅಕ್ಟೋಬರ್ 2024, 13:35 IST
Last Updated 2 ಅಕ್ಟೋಬರ್ 2024, 13:35 IST
ಅನುರಾ ಕುಮಾರ ದಿಸ್ಸನಾಯಕೆ
ಅನುರಾ ಕುಮಾರ ದಿಸ್ಸನಾಯಕೆ   

ಕೊಲಂಬೊ: ಕೊಲಂಬೊದಲ್ಲಿರುವ ಭಾರತದ ಹೈಕಮಿಷನರ್ ಸಂತೋಷ್‌ ಝಾ ಅವರು ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಮತ್ತು ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಬುಧವಾರ ಭೇಟಿ ಮಾಡಿದರು.

‘ಭಾರತ–ಶ್ರೀಲಂಕಾ ನಡುವಿನ ಪಾಲುದಾರಿಕೆಯ ಪ್ರಗತಿ ಹೆಚ್ಚಿಸುವ ಮತ್ತು ಉಭಯ ದೇಶಗಳ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು’ ಎಂದು ಹೇಳಿಕೆ ತಿಳಿಸಿದೆ.

ಶ್ರೀಲಂಕಾದ ಪ್ರಧಾನಿ ಹರಿಣಿ ಅಮರಸೂರ್ಯ ಅವರ ಕಚೇರಿಯಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಸಂತೋಷ್‌ ಝಾ ಸಲಹೆ ನೀಡಿದರು. 

ADVERTISEMENT

ಝಾ ಅವರು, ಶ್ರೀಲಂಕಾದ ನೂತನ ಅಧ್ಯಕ್ಷರಾದ ಬಳಿಕ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ಭೇಟಿ ಮಾಡಿದ ಮೊದಲ ವಿದೇಶಿ ರಾಯಭಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.