ಬೀಜಿಂಗ್: ಗಡಿ ವಿಚಾರವಾಗಿ ಉಭಯ ದೇಶಗಳ ನಡುವೆ ಉಲ್ಬಣಗೊಂಡಿರುವ ಸಮಸ್ಯೆಗಳನ್ನು ಸೂಕ್ತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಸಹಕರಿಸಲು ಸಿದ್ಧವಿರುವುದಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಅಜಿತ್ ಡೋಭಾಲ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮರುನೇಮಕವಾದ ಹಿನ್ನೆಲೆಯಲ್ಲಿ ವಾಂಗ್ ಅವರು ಶುಭಕೋರಲು ಮಂಗಳವಾರ ಕಳುಹಿಸಿದ್ದ ಸಂದೇಶದಲ್ಲಿ ಈ ವಿಚಾರ ತಿಳಿಸಿದ್ದಾರೆ. ವಾಂಗ್ ಅವರು ಚೀನಾದ ವಿದೇಶಾಂಗ ಸಚಿವರಷ್ಟೇ ಅಲ್ಲದೆ ಭಾರತ–ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾದ ವಿಶೇಷ ಪ್ರತಿನಿಧಿಯೂ ಆಗಿದ್ದಾರೆ.
‘ಗಡಿ ವಿಚಾರವಾಗಿ ಎರಡೂ ದೇಶಗಳು ಒಮ್ಮತಕ್ಕೆ ಬರಬೇಕಿದೆ. ಗಡಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ನಾವು ಭಾರತದೊಂದಿಗೆ ಸಹಕರಿಸಲು ಸಿದ್ಧವಿದ್ದೇವೆ. ಈ ಮೂಲಕ ಗಡಿಯಲ್ಲಿ ಶಾಂತಿ ಸ್ಥಾಪನೆ ಮಾಡಬೇಕಿದೆ’ ಎಂದು ವಾಂಗ್ ಅವರು ಡೋಭಾಲ್ ಅವರಿಗೆ ತಿಳಿಸಿರುವುದಾಗಿ ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.