ADVERTISEMENT

ಭಾರತ, ಡೊಭಾಲ್ ವಿರುದ್ಧ ಅಮೆರಿಕ ಕೋರ್ಟ್‌ ಸಮನ್ಸ್

ಹತ್ಯೆ ಸಂಚು ಆರೋಪಿಸಿ ಪನ್ನೂ ದಾವೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 16:03 IST
Last Updated 19 ಸೆಪ್ಟೆಂಬರ್ 2024, 16:03 IST
<div class="paragraphs"><p>ಅಜಿತ್ ಡೊಭಾಲ್</p></div>

ಅಜಿತ್ ಡೊಭಾಲ್

   

ನ್ಯೂಯಾರ್ಕ್‌: ‘ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು’ ಎಂದು ಆರೋಪಿಸಿ, ಭಾರತ ಸರ್ಕಾರ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ವಿರುದ್ಧ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ದಾಖಲಿಸಿರುವ ದಾವೆಗೆ ಸಂಬಂಧಿಸಿ, ನ್ಯೂಯಾರ್ಕ್‌ ಸೌತ್‌ ಡಿಸ್ಟ್ರಿಕ್ಸ್‌ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

‘ರಾ’ (ಆರ್‌ ಆ್ಯಡ್‌ ಎ ಡಬ್ಲ್ಯು) ಮಾಜಿ ಮುಖ್ಯಸ್ಥ ಸಾಮಂತ್‌ ಗೋಯಲ್, ಏಜೆಂಟ್‌ ವಿಕ್ರಮ್‌ ಯಾದವ್ ಹಾಗೂ ಸದ್ಯ ಅಮೆರಿಕ ಜೈಲಿನಲ್ಲಿರುವ ಭಾರತೀಯ ಉದ್ಯಮಿ ನಿಖಿಲ್‌ ಗುಪ್ತ ಅವರ ಹೆಸರುಗಳನ್ನೂ ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಸೆ.21ರಿಂದ 23ರ ವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದಕ್ಕೂ ಮುನ್ನವೇ ಈ ಬೆಳವಣಿಗೆ ನಡೆದಿದೆ.

ಈ ಪ್ರವಾಸ ಸಂದರ್ಭದಲ್ಲಿ ಮೋದಿ ಅವರು ಕ್ವಾಡ್‌ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು ಹಾಗೂ ವಿಶ್ವಸಂಸ್ಥೆಯ ಶೃಂಗಸಭೆ  ಉದ್ದೇಶಿಸಿ ಮಾತನಾಡುವರು. 

ಈ ಕುರಿತು ಗುರುವಾರ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ, ‘ಈ ಆರೋಪಗಳು ಅನಪೇಕ್ಷಿತ ಹಾಗೂ ಆಧಾರರಹಿತ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.