ನವದೆಹಲಿ, ಜುಲೈ 6– ಕಾರ್ಗಿಲ್ನಲ್ಲಿ ಮುಂದುವರೆದಿರುವ ಭೀಕರ ಕಾಳಗದಲ್ಲಿ ಭಾರತೀಯ ಸೇನೆ ಬಟಾಲಿಕ್ ಹಾಗೂ ಡ್ರಾಸ್ ವಲಯದ ನಾಲ್ಕು ಪ್ರಮುಖ ಶಿಖರಗಳನ್ನು ವಶಪಡಿಸಿ ಕೊಂಡಿತು. ಈ ಹೋರಾಟದಲ್ಲಿ ಪಾಕಿಸ್ತಾನದ 55 ಸೈನಿಕರು ಹಾಗೂ 30 ಅತಿಕ್ರಮಣಕಾರರು ಸತ್ತಿದ್ದಾರೆ.
ಬಟಾಲಿಕ್ ವಲಯದ ಪಾಯಿಂಟ್ 4812 ಶಿಖರ ಮತ್ತು ಪಾಯಿಂಟ್ 5000 ಪೂರ್ವ ಭಾಗದ ಶಿಖರಗಳನ್ನು ಭಾರತೀಯ ಸೇನೆಯು ನಿನ್ನೆ ರಾತ್ರಿ ವಶಕ್ಕೆ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.