ADVERTISEMENT

25 ವರ್ಷಗಳ ಹಿಂದೆ: ಜಾರ್ಜ್ ಖಾತೆ ಬದಲಾವಣೆಗೆ ಜಯಲಲಿತಾ ಪಟ್ಟು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 23:08 IST
Last Updated 29 ಮಾರ್ಚ್ 2024, 23:08 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಜಾರ್ಜ್ ಖಾತೆ ಬದಲಾವಣೆಗೆ ಜಯಲಲಿತಾ ಪಟ್ಟು

ನವದೆಹಲಿ, ಮಾರ್ಚ್ 29 (ಯುಎನ್‌ಐ, ಪಿಟಿಐ)– ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌ ಅವರನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂದು ಪ್ರಧಾನಿ ಎ.ಬಿ. ವಾಜಪೇಯಿ ಅವರು ನಿನ್ನೆ ಖಡಾಖಂಡಿತ ವಾಗಿ ಘೋಷಿಸಿದ್ದರೂ, ರಾಷ್ಟ್ರದ ಭದ್ರತೆ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಜಾರ್ಜ್ ಅವರ ಖಾತೆ ಬದಲಾಯಿಸಬೇಕು ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೇಲಿನ ತಮ್ಮ ಒತ್ತಡವನ್ನು ತೀವ್ರಗೊಳಿಸಿದ್ದಾರೆ.

ಇಂದು ಬೆಳಿಗ್ಗೆ ವಾಜಪೇಯಿ ಅವರೊಡನೆ ಜಯಲಲಿತಾ ಅವರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಬಹಿರಂಗ ಹೇಳಿಕೆ ನೀಡಿದ್ದು, ಜಾರ್ಜ್ ಫರ್ನಾಂಡಿಸ್ ಅವರಿಗೆ ಕಡಿಮೆ ಮಹತ್ವದ ಖಾತೆ ನೀಡುವಂತೆ ಆಗ್ರಹಿಸಿದ್ದಾರೆ.

ADVERTISEMENT

ರೈತರಿಗೆ ಶಾಪವಾಗಿರುವ ಮಲಿನ ವೃಷಭಾವತಿ

ಬೆಂಗಳೂರು, ಮಾರ್ಚ್ 29– ಒಂದು ಕಾಲಕ್ಕೆ ಜೀವವಾಹಿನಿಯಾಗಿ ರೈತರಿಗೆ ವರವಾಗಿದ್ದ ವೃಷಭಾವತಿ ನದಿ ಈಗ ಮಾಲಿನ್ಯದಿಂದ ಬಗ್ಗಡಗೊಂಡು ಅವರ ಪಾಲಿಗೆ ಶಾಪವಾಗಿ ಸಾವಿರಾರು ಎಕರೆ ಫಲವತ್ತಾದ ಜಮೀನು ಬಂಜರು ಭೂಮಿಯಾಗಿದೆ.

ಕನಕಪುರ, ರಾಮನಗರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕುಗಳ ಅನೇಕ ಹಳ್ಳಿಗಳಿಗೆ ‘ಪ್ರಜಾವಾಣಿ’ ಇಂದು ಭೇಟಿ ನೀಡಿದಾಗ, ವೃಷಭಾವತಿ ನದಿ ನೀರನ್ನು ಬಳಸಿ ಭೂಮಿ ಮತ್ತು ಬೆಳೆಯನ್ನು ಹಾಳು ಮಾಡಿಕೊಂಡ ರೈತರು ತಮ್ಮ ಗೋಳನ್ನು ತೋಡಿಕೊಂಡು ಕಣ್ಣೀರಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.