ADVERTISEMENT

25 ವರ್ಷಗಳ ಹಿಂದೆ: ಹೊಸ ಕೃಷಿ, ಪಶುವೈದ್ಯ ಕಾಲೇಜು ಮಂಜೂರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 19:28 IST
Last Updated 28 ಸೆಪ್ಟೆಂಬರ್ 2024, 19:28 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ಬುಧವಾರ ಸೆ.29.09.1999 

ಹೊಸ ಕೃಷಿ, ಪಶುವೈದ್ಯ ಕಾಲೇಜು ಮಂಜೂರು

ಬೆಂಗಳೂರು, ಸೆ.28 –  ಹೊಸಕೋಟೆ ತಾಲ್ಲೂಕು ಕನ್ನಮಂಗಲ ಸಮೀಪ ಹೊಸದಾಗಿ ತೋಟಗಾರಿಕಾ ಕಾಲೇಜು, ಕಲ್ಬುರ್ಗಿ ಜಿಲ್ಲೆ ಭೀಮರಾಯನಗುಡಿಯಲ್ಲಿ ಕೃಷಿ ಕಾಲೇಜು ಹಾಗೂ ಬಳ್ಳಾರಿ ಜಿಲ್ಲೆಯ ಕುರೆಕುಪ್ಪೆ ಬಳಿ ಪಶುವೈದ್ಯ ಕಾಲೇಜುಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ.

ADVERTISEMENT

ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್ ಅವರು ಆಸ್ಪತ್ರೆಯಿಂದ ಹಿಂದಿರುಗಿದ ನಂತರ ಮುಖ್ಯಮಂತ್ರಿಗಳ ಗೃಹ  ಕಚೇರಿ ‘ಕೃಷ್ಣಾ’ದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ವಾರ್ತಾ ಸಚಿವ ಎಂ.ಪಿ ಪ್ರಕಾಶ್‌ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.