ADVERTISEMENT

25 ವರ್ಷಗಳ ಹಿಂದೆ- ಬೆಂಗಳೂರಿನಿಂದ ರೈಲ್ವೆ ವಲಯ ವರ್ಗಾವಣೆ ಬೇಡ: ಎಚ್‌ಡಿಡಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 23:31 IST
Last Updated 13 ಮಾರ್ಚ್ 2024, 23:31 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ನೈರುತ್ಯ ರೈಲ್ವೆ ವಲಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಿದರೆ ಕರ್ನಾಟಕದಲ್ಲಿ ಕಾನೂನು–ಸುವ್ಯವಸ್ಥೆ ಸಮಸ್ಯೆ ಉಂಟಾಗುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು. 

ಬೆಂಗಳೂರಿನಲ್ಲಿ ಈಗಿರುವ ರೈಲ್ವೆ ವಲಯವನ್ನು ಉಳಿಸಿಕೊಂಡು, ಹುಬ್ಬಳ್ಳಿಗೇ ಪ್ರತ್ಯೇಕ
ವಾಗಿ ಮತ್ತೊಂದು ವಲಯವನ್ನು ಮಂಜೂರು ಮಾಡಿ ಎಂದು ಬಲವಾಗಿ ವಾದಿಸಿದರು. 

ಪೇಟೆಂಟ್ ಮಸೂದೆಗೆ ಸಂಸತ್ ಅಸ್ತು

ADVERTISEMENT

ನವದೆಹಲಿ, ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ಸಭಾತ್ಯಾಗದ ನಡುವೆ ವಿವಾದಾತ್ಮಕ ಪೇಟೆಂಟ್ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯಲ್ಲಿ ಇಂದು ಒಪ್ಪಿಗೆ ಸಿಗುವ ಮೂಲಕ ಸಂಸತ್ ಅನುಮೋದನೆ ನೀಡಿದಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.