ADVERTISEMENT

25 ವರ್ಷಗಳ ಹಿಂದೆ: ಭಂಡಾರಿ ರಾಜೀನಾಮೆ ಸಂಭವ; ಬಿಜೆಪಿಯಲ್ಲಿ ತೀವ್ರ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 23:50 IST
Last Updated 17 ಫೆಬ್ರುವರಿ 2024, 23:50 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಂಡಾರಿ ರಾಜೀನಾಮೆ ಸಂಭವ; ಬಿಜೆಪಿಯಲ್ಲಿ ತೀವ್ರ ಬಿಕ್ಕಟ್ಟು

ಪಟ್ನಾ, ಫೆ. 17 (ಪಿಟಿಐ)– ಬಿಹಾರದ ರಾಜ್ಯಪಾಲ ಸುಂದರ್ ಸಿಂಗ್ ಭಂಡಾರಿ ಅವರ ಮುಂದುವರಿಕೆ ಕುರಿತು ತಲೆದೋರಿರುವ ಅನಿಶ್ಚಯತೆ ನಡುವೆಯೇ ಅವರು ರಾಜ್ಯದ ಆಡಳಿತವನ್ನು ಅರ್ಧಕ್ಕೆ ಬಿಟ್ಟು ತಮ್ಮ ಸಾಮಾನು– ಸರಂಜಾಮು ಸಹಿತ ಇಂದು ದೆಹಲಿಗೆ ಪ್ರಯಾಣಿಸಿದರು.

ಭಂಡಾರಿ ಅವರು ಅಧಿಕಾರ ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿದರೆ, ‘ರಾಜ್ಯಪಾಲರನ್ನು ಬದಲಿಸುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.