ಕಾವೇರಿ:ಕೇಂದ್ರದಕರಡುಯೋಜನೆಗೆರಾಜ್ಯ ವಿರೋಧ
ನವದೆಹಲಿ, ಜೂನ್ 18 – ಕಾವೇರಿ ನೀರು ಹಂಚಿಕೆ ಕುರಿತು ನ್ಯಾಯಮಂಡಳಿ ನೀಡಿರುವ ಮಧ್ಯಂತರ ಆದೇಶದ ಜಾರಿಗೆ ಕೇಂದ್ರ ಸರ್ಕಾರ ಪ್ರಸ್ತಾವನೆ ಮಾಡಿರುವಕರಡುಯೋಜನೆಯನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ವಿರೋಧಿಸಿದೆ.
ಕರಡುಯೋಜನೆಯಲ್ಲಿ ಮಧ್ಯಂತರ ತೀರ್ಪಿನಂತೆ ತಮಿಳುನಾಡಿಗೆ ನೀಡಬೇಕಾದ 205 ಟಿಎಂಸಿ ನೀರಿನ ಪ್ರಮಾಣವನ್ನು 180 ಟಿಎಂಸಿಗೆ ಇಳಿಸಲಾಗಿಲ್ಲ. ಬಿಡಬೇಕಾದ ಒಟ್ಟು ನೀರಿನ ಪ್ರಮಾಣವನ್ನು ಕಾಲಸ ಅಂತ್ಯದ ವೇಳೆಗೆ ಲೆಕ್ಕ ಹಾಕಬೇಕು, ವಾರ ಅಥವಾ ತಿಂಗಳಿನ ಅಂತ್ಯದ ವೇಳೆಗಲ್ಲ ಎಂದು ಕರ್ನಾಟಕ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಕರಡನ್ನು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.