ಬೆಂಗಳೂರು, ಜೂನ್ 16– ‘ಮಾನವೀಯತೆಯೇ ದೇವರು’ ಎಂದು ಪ್ರತಿಪಾದಿಸುತ್ತ ಬಂದಿರುವ ನಾಡಿನ ಹಿರಿಯ ಲೇಖಕ ಪ್ರೊ. ಎ.ಎನ್. ಮೂರ್ತಿರಾವ್ ಅವರಿಗೆ ಇಂದು ನೂರರ ಹರೆಯ.
ಶತಾಯುಷಿ ಮೂರ್ತಿರಾಯರಿಗೆ ಅಭಿನಂದಿಸಲು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ರವೀಂದ್ರ ಕಲಾಕ್ಷೇತ್ರದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಆಕಾಶ ನೀಲಿ ಬಣ್ಣದ ಅಂಗಿ ಹಾಗೂ ಬಿಳಿ ಲುಂಗಿ ಧರಿಸಿ, ಯಾರ ಸಹಾಯವೂ ಇಲ್ಲದೆ ತಾವೇ ಕೋಲುರಿಕೊಂಡು ಎಂದಿನ ಲವಲವಿಕೆಯಿಂದ ವೇದಿಕೆ ಏರಿದ ಮೂರ್ತಿರಾಯರನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು ಫಲ ತಾಂಬೂಲ ನೀಡಿ ಶಾಲು ಹೊದೆಸಿ ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.