ಕಲ್ಕತ್ತ, ಜೂನ್ 22 (ಯುಎನ್ಐ, ಪಿಟಿಐ)– ನ್ಯೂ ಜಲಪೈಗುರಿ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ ಕಾರ್ಗಿಲ್ಗೆ ತೆರಳುತ್ತಿದ್ದ ಇಬ್ಬರು ಸೈನಿಕರೂ ಸೇರಿ 10 ಮಂದಿ ಬಲಿಯಾಗಿ, ಕನಿಷ್ಠ 80 ಮಂದಿ ಗಾಯಗೊಂಡಿದ್ದಾರೆ.
2 ಫ್ಲಾಟ್ಫಾರಂಗಳ ಮಧ್ಯೆ ಸಂಭವಿಸಿದ ಶಬ್ದ ಒಂದು ಕಿ. ಮೀ. ವರೆಗೆ ಕೇಳಿಸಿತು. ಸ್ಫೋಟಕ್ಕೆ ದೆಹಲಿಗೆ ತೆರಳುತ್ತಿದ್ದ ಮಹಾನಂದ ಎಕ್ಸ್ಪ್ರೆಸ್ ರೈಲುಗಾಡಿ ಗುರಿಯಾಗಿದೆ ಎಂದು ಕಟಿಹಾರ್ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೋಮನಾಥ ಮುಖರ್ಜಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.