ಮಾಜಿ ಮಹಾರಾಜರ ಪುತ್ರಿ ಗಾಯತ್ರಿ ದೇವಿ ನಿಧನ
ಬೆಂಗಳೂರು, ಜೂನ್ 30– ಮಾಜಿ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಪುತ್ರಿ ಶ್ರೀಮತಿ ಗಾಯತ್ರಿ ದೇವಿ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು.
ದಿವಂಗತರಿಗೆ 28 ವರ್ಷ ವಯಸ್ಸಾಗಿತ್ತು. ಪತಿ ಶ್ರೀರಾಮಚಂದ್ರರಾಜೇ ಅರಸು, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.
ಕಛತೀವ್ ವಾಪಸ್ ಪಡೆಯಲು ಡಿ.ಎಂ.ಕೆ. ಚಳವಳಿ?
ಮಧುರೆ, ಜೂನ್ 30– ಭಾರತ– ಶ್ರೀಲಂಕಾ ಒಪ್ಪಂದದ ಅನ್ವಯ ಶ್ರೀಲಂಕಾಕ್ಕೆ ನೀಡಲಾಗಿರುವ ಕಛತೀವು ದ್ವೀಪವನ್ನು ಮತ್ತೆ ಪಡೆಯಲು ಚಳವಳಿ ಹೂಡುವ ಸಾಧ್ಯತೆಯನ್ನು ಡಿ.ಎಂ.ಕೆ. ಪಕ್ಷವು ಪರಿಶೀಲಿಸುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಇಂದು ಇಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.