‘ನಿರ್ಮಾಲ್ಯಂ’, ’ಕಾಡು’, ‘ಅಬಚೂರಿನ ಪೋಸ್ಟಾಫೀಸು’ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ
ನವದೆಹಲಿ, ಜುಲೈ 20– ನಿರ್ಮಾಲ್ಯಂ ಮಲೆಯಾಳಂ ಚಿತ್ರ 1973ರ ಅತ್ಉತ್ತಮ ಕಥಾ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದೆ.
‘ಕಾಡು’ ಕನ್ನಡ ಚಿತ್ರ ರಾಷ್ಟ್ರ ಮಟ್ಟದ ಉತ್ತಮ ಕಥಾ ಚಿತ್ರಕ್ಕಾಗಿ ಎರಡನೇ ಬಹುಮಾನ ಗಳಿಸಿದೆ. ಎನ್.ಎಲ್.ಕಂಬೈನ್ಸ್ ಅವರು ನಿರ್ಮಿಸಿದ ಈ ಚಿತ್ರಕ್ಕೆ ಗಿರೀಶ್ ಕಾರ್ನಾಡ್ ನಿರ್ದೇಶಕರು. ‘ಅಬಚೂರಿನ ಪೋಸ್ಟಾಫೀಸು’ ಕನ್ನಡ ಚಿತ್ರಕ್ಕೆ ಪ್ರಾದೇಶಿಕ ಭಾಷೆಗಳಿಗೆ ನೀಡಲಾಗುವ ಪ್ರಶಸ್ತಿ ದೊರೆತಿದೆ. ‘ದಿ ಫ್ಲೇಮ್ ಬರ್ನ್ಸ್ ಬ್ರೈಟ್’ ಅತ್ಯುತ್ತಮ ಸಾಕ್ಷ್ಯಚಿತ್ರ ಬಹುಮಾನ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.