ADVERTISEMENT

50 ವರ್ಷಗಳ ಹಿಂದೆ | ಕರ್ನಾಟಕ ಮಹಾರಾಷ್ಟ್ರ ವಿಲೀನ: ಗಡಿವಿವಾದಕ್ಕೆ ವಿನೋಬಾ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 23:51 IST
Last Updated 27 ಜುಲೈ 2024, 23:51 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಕರ್ನಾಟಕ ಮಹಾರಾಷ್ಟ್ರ ವಿಲೀನ | ಗಡಿವಿವಾದಕ್ಕೆ ವಿನೋಬಾ ಸಲಹೆ

ವರ್ಧಾ, ಜುಲೈ 27– ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ವಿಲೀನಗೊಳಿಸಿ ದ್ವಿಭಾಷಾ ರಾಜ್ಯವೊಂದನ್ನು ಸೃಷ್ಟಿಸುವ ಮೂಲಕ ಈ ಎರಡು ರಾಜ್ಯಗಳ ನಡುವಣ ಗಡಿವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬಹುದು ಎಂದು ಸರ್ವೋದಯ ನಾಯಕ ಆಚಾರ್ಯ ವಿನೋಬಾಭಾವೆಯವರು ಅಭಿಪ್ರಾಯಪಟ್ಟಿದ್ದಾರೆ.

ವಿಲೀನ ಸಾಧ್ಯವಾಗದಿದ್ದರೆ, ಮಹಾರಾಷ್ಟ್ರ ಸರ್ಕಾರ ಬೆಳಗಾವಿ ತೆಗೆದುಕೊಂಡು ಇಡೀ ಸೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕಕ್ಕೆ ನೀಡಬೇಕೆಂದು ಬದಲಿ ಪರಿಹಾರ ಮಾರ್ಗ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.