ಮುಂಬೈ ಆಚೆ ಸಾಗರ ತಳದಲ್ಲಿ ತೈಲೋದ್ಭವ: ಉತ್ತಮ ನಿಕ್ಷೇಪ ಪತ್ತೆ
ನವದೆಹಲಿ, ಫೆ. 19– ಮುಂಬೈ ಆಚೆ ಕ್ಯಾಂಬೇ ಸಮುದ್ರದಾಳದಲ್ಲಿ ತೋಡಲಾದ ಮೊದಲ ಬಾವಿಯಲ್ಲೇ ಇಂದು ಪೆಟ್ರೋಲಿಯಂ ತೈಲ ಉದ್ಭವಿಸಿತು. ಹದಿಮೂರು ಕೋಟಿ ರೂ. ವೆಚ್ಚದ ‘ಸಾಗರ ಸಾಮ್ರಾಟ್’ ತೈಲಾನ್ವೇಷಕ ನೌಕೆ ಸಿಬ್ಬಂದಿಯ ಹದಿನಾಲ್ಕು ದಿನಗಳ ಶ್ರಮ ಫಲಿಸಿತು.
ವಿಶ್ವ ತೈಲ ಬಿಕ್ಕಟ್ಟಿನ ಬಿಸಿಗೆ ತಾನೂ ತುತ್ತಾಗಿರುವ ಭಾರತದ ಪಾಲಿಗೆ ಮುಂಬೈ ಬಳಿ ತೈಲೋದ್ಭವವಾಗಿರುವುದು ಸಂತಸ ತಂದ ಸಂಗತಿ.
1976ರ ವೇಳೆಗೆ ಹಾಸನ–ಮಂಗಳೂರು ರೈಲು ಮಾರ್ಗ ಪೂರ್ಣ
ನವದೆಹಲಿ, ಫೆ. 19– 1964ನೇ ನವೆಂಬರ್ ನಲ್ಲಿ ಮಂಜೂರಾದ ಹಾಸನ–ಮಂಗಳೂರು ರೈಲು ಮಾರ್ಗ ಯೋಜನೆಯು 3,587 ಲಕ್ಷ ರೂ. ವೆಚ್ಚದಲ್ಲಿ 1976ನೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದೆಂದು ರೈಲ್ವೆ ಖಾತೆ ಉಪಸಚಿವ ಮಹಮದ್ ಷಫಿ ಕುರೇಷ್ ಅವರು ಲೋಕಸಭೆಯಲ್ಲಿ ಇಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.