ಬೆಂಗಳೂರು, ಮಾ. 2– ಮಹಾಜನ್ ವರದಿಯನ್ನು ಒಪ್ಪದಿದ್ದಲ್ಲಿ ಗಡಿ ವಿವಾದದ ಬಗ್ಗೆ ಯಥಾಸ್ಥಿತಿಯನ್ನು ಉಳಿಸಿಕೊಂಡುಬರಲು ರಾಜ್ಯ ಸರ್ಕಾರ ತೀರ್ಮಾನಿಸಿದೆಯೆಂದು ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು. ಕರ್ನಾಟಕ– ಮಹಾರಾಷ್ಟ್ರ ಗಡಿ ಸಮಸ್ಯೆ ಪರಿಹಾರಕ್ಕೆ ಪರಿಶೀಲಿಸಿದ ಹಲವು ಪರಿಹಾರಗಳಲ್ಲಿ ‘ಯಥಾಸ್ಥಿತಿಯೂ ಒಂದು’ ಎಂದರು.
ಬಿ.ಜಿ. ಬಣಕಾರ ಮತ್ತು ಬಿ.ಬಿ. ಸಯನಕ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅರಸು ಅವರು, ಆ ವಿಷಯದ ಬಗೆಗೆ ಪ್ರಧಾನಿಗಳಾಗಲೀ ಕೇಂದ್ರದ ಗೃಹ ಸಚಿವರಾಗಲೀ ನಿರ್ದಿಷ್ಟ ಸಲಹೆಗಳನ್ನು ನೀಡಿದ ವಿಷಯ ತಮಗೆ ಗೊತ್ತಿಲ್ಲವೆಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.