ನವದೆಹಲಿ, ಗುಜರಾತ್ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ರಾಜ್ಯಪಾಲ ಕೆ.ಕೆ. ವಿಶ್ವನಾಥನ್ ಅವರು ಇಂದು ರಾತ್ರಿ ಅಹ್ಮದಾಬಾದಿನಲ್ಲಿ ವಿಧಾನಸಭೆ ವಿಸರ್ಜನೆಯ ವಿಷಯವನ್ನು ಪ್ರಕಟಿಸಿದರು.
ಇಂದು ರಾತ್ರಿ ಇಲ್ಲಿ ಸೇರಿದ್ದ ಕೇಂದ್ರ ಸಂಪುಟದ ತುರ್ತು ಸಭೆಯಲ್ಲಿ ಗುಜರಾತ್ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.
ರಾಜ್ಯದ ಶಾಸಕರು, ಮಂತ್ರಿಗಳಿಗೆ ಹೆಚ್ಚು ಸಂಭಾವನೆ: ಪಕ್ಷಕ್ಕೆ ಸಮಿತಿ ಶಿಫಾರಸು
ಬೆಂಗಳೂರು, ಕರ್ನಾಟಕದ ಶಾಸಕರ ಈಗಿನ ಒಟ್ಟು ಸಂಭಾವನೆಯನ್ನು 400 ರೂಪಾಯಿಗಳಿಂದ 600 ರೂಪಾಯಿಗಳಿಗೂ ಮಂತ್ರಿಗಳ ವೇತನವನ್ನು 1,000ದಿಂದ 1,250 ರೂಪಾಯಿಗಳಿಗೂ ಏರಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷವು ನೇಮಿಸಿದ ಸಮಿತಿಯೊಂದು ಪಕ್ಷಕ್ಕೆ ಶಿಫಾರಸು ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.