ನವದೆಹಲಿ, ಮಾರ್ಚ್ 31– ಸರ್ಕಾರದಿಂದಲೇ ಆಹಾರಧಾನ್ಯಗಳ ಹಂಚಿಕೆ ವ್ಯವಸ್ಥೆಯನ್ನು ಕೈಗಾರಿಕಾ ಪ್ರದೇಶಗಳು ಮತ್ತು ಒಂದು ನಿರ್ದಿಷ್ಟ ಪ್ರಮಾಣದ ಜನಸಂಖ್ಯೆ ಇರುವ ಕೆಲವು ನಗರಗಳಿಗಷ್ಟೇ ಸೀಮಿತಗೊಳಿಸಿ ಉಳಿದೆಲ್ಲಾ ಪ್ರದೇಶಗಳನ್ನೂ ಎಂದಿನ ವ್ಯಾಪಾರ ವ್ಯವಸ್ಥೆಗೆ ಒಳಪಡಿಸುವ ಸಲಹೆಗಳನ್ನು ಸರ್ಕಾರ ಈಗ ಪರಿಶೀಲಿಸುತ್ತಿರುವುದೆಂದು ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತಿಳಿಸಿದರು.
ಹೊಸ ಗೋಧಿ ನೀತಿ ಕುರಿತು ಇಂದು ರಾತ್ರಿ ರೇಡಿಯೊ ಸಂದರ್ಶನದಲ್ಲಿ ವಿವರಣೆ ನೀಡಿದ ಅಹ್ಮದ್ ಅವರು, ಇಡೀ ಜನಸಂಖ್ಯೆಯಲ್ಲಿ ದುರ್ಬಲವರ್ಗದ ಅಗತ್ಯ ಪೂರೈಕೆಯೇ ಹೊಸ ನೀತಿಯ ಮುಖ್ಯ ಉದ್ದೇಶವಾಗಿರುವುದೆಂದು ಹೇಳಿದರು.
ಪುಣೆ, ಮಾರ್ಚ್ 31– ‘‘ಪ್ರಸಕ್ತ ಪರಿಸ್ಥಿತಿಯಲ್ಲಿ ಭಾರತದ ಪ್ರಜಾಸತ್ತೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಗೊಂದಲಮಯ ಪರಿಸ್ಥಿತಿ, ಉದ್ದೇಶರಹಿತ ಕಾರ್ಯಕ್ರಮಗಳು, ಸೂಕ್ತ ಮಾರ್ಗದರ್ಶನದ ಕೊರತೆ, ಸರ್ಕಾರದ ಮತ್ತು ರಾಜಕೀಯ ರಂಗದ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ– ಇವೆಲ್ಲ ಪ್ರಧಾನಿ ಇಂದಿರಾ ಗಾಂಧಿಯವರ ನಾಯಕತ್ವದ ಲಕ್ಷಣಗಳಿರಬಹುದು. ಆದರೆ ಇವೆಲ್ಲ ಕಾಂಗ್ರೆಸ್ಸನ್ನು, ಪ್ರಜಾಸತ್ತೆಯನ್ನೂ ವಿನಾಶದ ಅಂಚಿಗೆ ದೂಡುತ್ತಿವೆ’’.
ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.