ಪುನರ್ ವಿಂಗಡಣೆ ಶಾಸನ ವಿರುದ್ಧ ಬದಲಾವಣೆಗೆ ಸರ್ಕಾರಿ ಮೋಟಾರ್ ಚಾಲಕರ ಆಕ್ಷೇಪ
ಬೆಂಗಳೂರು, ಫೆ. 15– ರಾಜ್ಯ ಪುನರ್ ವಿಂಗಡಣೆಗೆ ಮುಂಚೆ ಇದ್ದ ಸರ್ಕಾರಿ ನೌಕರರ ಸ್ಥಾನಮಾನಗಳನ್ನು ಬದಲಾಯಿಸುವುದನ್ನು ರಾಜ್ಯ ಪುನರ್ ವಿಂಗಡಣಾ ಶಾಸನದಂತೆ ನಿಷೇಧಿಸಿದ್ದರೂ ತಮ್ಮ ದರ್ಜೆಯನ್ನು
ಬದಲಾಯಿಸಲಾಯಿತೆಂದು ಕರ್ನಾಟಕ ಸರ್ಕಾರದ ಮೋಟಾರ್ ಡ್ರೈವರ್ಗಳು ಆಕ್ಷೇಪಿಸಿದ್ದಾರೆ.
ರಾಜ್ಯ ಪುನರ್ ವಿಂಗಡಣೆಗೆ ಮುಂಚೆ ತಾವು ಮೂರನೇ ದರ್ಜೆ ನೌಕರರಾಗಿದ್ದು, ಈಗ ತಮ್ಮನ್ನು ನಾಲ್ಕನೇ ದರ್ಜೆ ನೌಕರರೆಂದು ಪರಿಗಣಿಸಲಾಗುತ್ತಿದೆಯೆಂದು ಸರ್ಕಾರಿ ಮೋಟಾರ್ ಡ್ರೈವರ್ಗಳ ಕೇಂದ್ರ ಸಂಘದ ಅಧ್ಯಕ್ಷ ವಿ.ಸಿ. ಕೃಷ್ಣಸ್ವಾಮಿ ಮತ್ತು ಕಾರ್ಯದರ್ಶಿ ವಿ.ಕೆ.ಶಂಕರ್ರವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಆಕ್ಷೇಪಿಸಿ, ಅನೇಕ ಸಂದರ್ಭಗಳಲ್ಲಿ ಯಾವುದೇ ಪರಿಹಾರವಿಲ್ಲದೆ ಒಂದೇ ಸಮನೆ 18 ಗಂಟೆಗಳ ಕಾಲ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.