ನಾಲ್ವರ ಮತಾಂತರ, ಮೇಲ್ಮನೆಗೆ ಎರಡೂ ಕಾಂಗ್ರೆಸಿಗರ ಆಯ್ಕೆ
ಬೆಂಗಳೂರು, ಮೇ 9– ಅತ್ಯಧಿಕ ಮತ ಗಳಿಸಿದ ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ ಹಾಗೂ ಉಳಿದ ಎಲ್ಲ ಆರುಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಲ್ಕು ಮತಗಳು ಹೊರಕ್ಕೆ ಹೋಗಿರುವುದೇ ಅಲ್ಲದೆ, ಪಕ್ಷದ ಅಭ್ಯರ್ಥಿಗಳ ನಡುವೆಯೂ ಸ್ವಲ್ಪ ಮಟ್ಟಿಗೆ ಮತಾಂತರ ನಡೆದಿದೆ.
ಸಂಸ್ಥಾ ಕಾಂಗ್ರೆಸ್ಸಿನ ಶ್ರೀಮತಿ ಸರೋಜಿನಿ ತಿಮ್ಮೇಗೌಡ 33, ಕಾಂಗ್ರೆಸ್ಸಿನ ಎಫ್.ಎಂ. ಖಾನ್ 30, ಕಲ್ಯಾಣರಾವ್ ಮರುಗುತ್ತಿ 28, ರಾಘವೇಂದ್ರರಾವ್ ಜಾಗೀರ್ದಾರ್ 27 ಹಾಗೂ ಎಸ್. ಶಿವಪ್ಪ 27 ಪ್ರಥಮ ಮತಗಳನ್ನು ಗಳಿಸಿ ಮೊದಲಿನ ಸುತ್ತಿನಲ್ಲೇ ಆಯ್ಕೆಯಾದರು.
ಅಕ್ಕಿ–ಭತ್ತದ ಅಂತರಜಿಲ್ಲಾ ಸಾಗಾಣಿಕೆ ನಿರ್ಬಂಧ ರದ್ದಾಗದು
ಬೆಂಗಳೂರು, ಮೇ 90 – ರಾಜ್ಯದ ಹಿತದೃಷ್ಟಿಯಿಂದ ಅಂತರ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ಪ್ರತಿಬಂಧಿಸುವ ಪರಿಸ್ಥಿತಿ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶ್ರೀ ಬಿ.ವಿ. ಕಕ್ಕಿಲ್ಲಾಯ ಅವರು ಕಳುಹಿಸಿದ್ದ ಗಮನ ಸೆಳೆಯುವ ನೋಟಿಸಿಗೆ ಉತ್ತರಿಸಿದ ಆಹಾರ ಸಚಿವ ಶ್ರೀ ಕೆ.ಎಚ್. ಪಾಟೀಲರು ಅಂತರ್ ಜಿಲ್ಲಾ ಅಕ್ಕಿ– ಭತ್ತ ಸಾಗಾಣಿಕೆ ನಿರ್ಬಂಧ ತೆಗೆದುಹಾಕಬಹುದೆಂಬ ಪ್ರಶ್ನೆಯನ್ನು ಸರ್ವದೃಷ್ಟಿಯಿಂದ ಆಲೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.