ADVERTISEMENT

50 ವರ್ಷಗಳ ಹಿಂದೆ | ಅರಾಜಕತೆ ಮೂಲಕ ಸರ್ಕಾರ ಉರುಳಿಸುವ ಸಂಚು: ಇಂದಿರಾ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2024, 23:34 IST
Last Updated 6 ಏಪ್ರಿಲ್ 2024, 23:34 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

‘ಅವ್ಯವಸ್ಥೆ, ಅಶಾಂತಿ ಸೃಷ್ಟಿಸಿ ರಾಜ್ಯಸರ್ಕಾರಗಳ ಪದಚ್ಯುತಿಗೆ ಸಂಚು’

ಪುಣೆ, ಏ.6– ವ್ಯಾಪಕ ಅವ್ಯವಸ್ಥೆ ಮತ್ತು ಕಾನೂನು ಹಾಗೂ ನೆಮ್ಮದಿ ಪಾಲನೆ ಸಮಸ್ಯೆಗಳನ್ನು ಸೃಷ್ಟಿಸುವ ಮೂಲಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸುವ ಸಂಚೊಂದನ್ನು ಮಾಡಲಾಗುತ್ತಿದೆಯೆಂದು ಪ್ರಧಾನಿ ಇಂದಿರಾಗಾಂಧಿ ಅವರು ಇಲ್ಲಿ ಇಂದು ಹೇಳಿದರು.

ಇಲ್ಲಿನ ರೇಸ್‌ಕೋರ್ಸ್‌ ಮೈದಾನದಲ್ಲಿ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ನಾವು ಹೊಸ ಅಧ್ಯಕ್ಷರನ್ನು ಚುನಾಯಿಸುವುದಕ್ಕೂ ಮುಂಚೆ ಹೊಸ ಚುನಾವಣೆಗಳನ್ನು ನಡೆಸಲು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸುವುದೇ ಈ ಸಂಚಿನ ಹಿಂದೆ ಅಡಗಿರುವ ಮುಖ್ಯ ಉದ್ದೇಶ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT