ನವದೆಹಲಿ, ಜೂನ್ 13– ಕರ್ನಾಟಕದ ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿರುವ ಕಬ್ಬಿಣದ ಅದಿರು ನಿಕ್ಷೇಪದ ಅಭಿವೃದ್ಧಿ ಯೋಜನೆ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡಲು ಕಬ್ಬಿಣ ಅದಿರು ಮಂಡಳಿ ಸಮಿತಿಯೊಂದನ್ನು ರಚಿಸಿದೆ.
ನಿಕ್ಷೇಪವನ್ನು ಹೊರತೆಗೆಯಲು ಕೈಗೊಳ್ಳುವ ನಾನಾ ವಿಧಾನಗಳಿಗೆ ಬೇಕಾಗುವ ಬಂಡವಾಳ ಹಾಗೂ ಆ ಪ್ರದೇಶದಲ್ಲಿ ಉದ್ಯೋಗ ನೀಡಿಕೆ ಅವಕಾಶವನ್ನು ಹೆಚ್ಚಿಸುವ ಅಗತ್ಯ– ಈ ಹಿನ್ನೆಲೆಯಲ್ಲಿ, ಸಮಿತಿಯು ಉತ್ಪಾದನೆ ಕುರಿತು ಯೋಜನೆಯನ್ನು ರೂಪಿಸಲಿದೆ.
ಬೆಂಗಳೂರು, ಜೂನ್ 13– ರಾಜ್ಯದಲ್ಲಿ ಹರಿಜನ, ಗಿರಿಜನರ ಹಕ್ಕುಬಾಧ್ಯತೆಗಳನ್ನು
ರಕ್ಷಿಸಲು ಸರ್ಕಾರ ಪ್ರತ್ಯೇಕ ಪೊಲೀಸ್ ಘಟಕವೊಂದನ್ನು ಶೀಘ್ರದಲ್ಲಿಯೇ ಸ್ಥಾಪಿಸಲು ಪರಿಶೀಲಿಸುತ್ತಿದೆ.
ಸಮಾಜ ಕಲ್ಯಾಣ ಸಚಿವ ಎನ್. ರಾಚಯ್ಯ ಈ ವಿಷಯವನ್ನು ಸುದ್ದಿಗಾರರಿಗೆ ಪ್ರಕಟಿಸಿ, ಆ ಘಟಕವು ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರನ್ನು ಮುಖ್ಯಾಧಿಕಾರಿಯನ್ನಾಗಿ ಪಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.