ADVERTISEMENT

50 ವರ್ಷಗಳ ಹಿಂದೆ: ಕಳ್ಳಸಾಗಣೆದಾರರ ಗೂಢಜಾಲ ಭೇದಿಸಲು ಸರ್ಕಾರದ ದೃಢ ಕ್ರಮ

ಪ್ರಜಾವಾಣಿ ವಿಶೇಷ
Published 21 ಸೆಪ್ಟೆಂಬರ್ 2024, 22:53 IST
Last Updated 21 ಸೆಪ್ಟೆಂಬರ್ 2024, 22:53 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನವದೆಹಲಿ, ಸೆ.21– ಕಳ್ಳಸಾಗಣೆದಾರರ ವಿರುದ್ಧ ಸರ್ಕಾರ ಈಗ ಕೈಗೊಂಡಿರುವ ಉಗ್ರಕ್ರಮ ಕಡೆಯ ತನಕ ಮುಂದುವರಿಯುವುದು ಎಂದು ಕೇಂದ್ರ ಹಣಕಾಸು ಖಾತೆ ಸ್ಟೇಟ್‌ ಸಚಿವ ಕೆ.ಆರ್‌.ಗಣೇಶ್‌ ಅವರು ಇಂದು ಘೋಷಿಸಿದರು.

ಹಲವು ವರ್ಷಗಳಿಂದ ಸಾಗಾಣೆದಾರರು ರ‌ಚಿಸಿಕೊಂಡಿರುವ ವ್ಯಾಪಕ ಮತ್ತು ಸಶಕ್ತ ಜಾಲವನ್ನು ಭೇಧಿಸಲು ಮತ್ತು ಕಳ್ಳಸಾಗಣೆ ಕಾರ್ಯಚರಣೆ ಪತ್ತೆಹಚ್ಚಲು ಗೂಢಚರ ಸಂಸ್ಥೆ, ಸುಂಕದಕಟ್ಟೆ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಸಂಘಟಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT