ಕರ್ನಾಟಕದ ವೀರಗಲ್ಲುಗಳ ಬಗ್ಗೆ ಡಾ.ಎಂ. ಚಿದಾನಂದಮೂರ್ತಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ, ನನ್ನ ಅಧ್ಯಯನವನ್ನು 1983ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರಕಟಿಸಿದ್ದೆ. ಈಗ ಅದನ್ನು ಮರುಮುದ್ರಣ ಮಾಡಲು ಉದ್ದೇಶಿಸಿದ್ದೇನೆ.
ನನ್ನ ನಿಬಂಧವನ್ನು ಓದಿರುವ ಸಂಶೋಧಕರೂ, ಅಧ್ಯಯನಾಸಕ್ತರೂ ನನ್ನ ಪುಸ್ತಕದೊಳಗೆ ಲೋಪದೋಷಗಳನ್ನು ಕಂಡಿದ್ದರೆ, ಅವುಗಳನ್ನು ಈ ಸಂದರ್ಭದಲ್ಲಿ ನನ್ನ ಗಮನಕ್ಕೆ ತಂದರೆ ಸರಿಪಡಿಸಿಕೊಳ್ಳುತ್ತೇನೆ. ಹೊಸ ಅಂಶಗಳನ್ನು ತಿಳಿಸಬೇಕೆಂದು ಅನ್ನಿಸಿದರೆ ಈ ನನ್ನ ವಿಳಾಸಕ್ಕೆ ಪತ್ರಮುಖೇನ ತಿಳಿಸಬೇಕೆಂದು ಕೋರುತ್ತೇನೆ. ವಿಳಾಸ: ಡಾ.ಆರ್. ಶೇಷಶಾಸ್ತ್ರಿ, 13–2–64, ಶ್ರೀನಿವಾಸನಗರ, ಅನಂತಪುರಂ-– 515001, ಆಂಧ್ರಪ್ರದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.