ADVERTISEMENT

ವಾಚಕರ ವಾಣಿ | ಗಡಿ ತಂಟೆ: ಚೀನಾಗೆ ತಕ್ಕ ಉತ್ತರ ನೀಡಬೇಕು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 19:31 IST
Last Updated 16 ಡಿಸೆಂಬರ್ 2022, 19:31 IST

ಚೀನಾದ ಸೈನಿಕರು ಪದೇಪದೇ ನಮ್ಮ ನೆಲದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ. ತವಾಂಗ್ ವಲಯದಲ್ಲಿ ನಮ್ಮ ಸೈನಿಕರು ಅಂತಹ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದಾರೆ. ಚೀನಾದ ಉದ್ಧಟತನವನ್ನು ಇನ್ನೂ ಎಷ್ಟು ದಿನ ಸಹಿಸಿಕೊಳ್ಳಬೇಕು? ಸಾಕು, ನಮ್ಮ ಪ್ರಧಾನಿ ಎಚ್ಚೆತ್ತುಕೊಳ್ಳಬೇಕು ಹಾಗೂ ಪದೇಪದೇ ಕೆಣಕುತ್ತಿರುವ ತಂಟೆಕೋರರಿಗೆ ತಕ್ಕ ಉತ್ತರ ನೀಡಬೇಕು. ಚೀನಾಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಾಗ ವಿರೋಧ ಪಕ್ಷಗಳನ್ನು ಹೊರಗೆ ಇಟ್ಟು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವುದನ್ನು ಕೇಂದ್ರ ಸರ್ಕಾರ ಬಿಡಬೇಕು. ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯ ಲಾಭ ಪಡೆಯಲು ಹಾತೊರೆಯುವುದು ತರವಲ್ಲ.

- ರಾಮಲಿಂಗ,ಮಾಡಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT