ADVERTISEMENT

ದಸರಾ: ಎಚ್ಚರ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST

ದಸರಾ ಮಹೋತ್ಸವವು ಚಾಮುಂಡೇಶ್ವರಿಯ ಅನುಗ್ರಹದಿಂದ ಚೆನ್ನಾಗಿ ಜರುಗಿತು. ಆದರೆ, ಚಿನ್ನದ ಅಂಬಾರಿ ಹೊತ್ತ ಅರ್ಜುನನ ಛಾಯಾಚಿತ್ರ ತೆಗೆದುಕೊಳ್ಳಲು ಜನ ಮುಗಿಬಿದ್ದದ್ದರಿಂದ, ಅರ್ಜುನ ಹಾಗೂ ಆತನ ಮಾವುತನಿಗೆ ಇದರಿಂದ ತೊಂದರೆಯಾಯಿತು. ಲಕ್ಷಾಂತರ ಜನ ಸೇರುವಲ್ಲಿ ಮೂಕಪ್ರಾಣಿಗಳಿಗೆ ತೊಂದರೆಯಾಗದಂತೆ ಸಾರ್ವಜನಿಕರು ನಡೆದುಕೊಳ್ಳಬೇಕು.

ಫೋಟೊ ಫ್ಲ್ಯಾಷ್‌ನಿಂದ ಗಾಬರಿಗೊಂಡ ಅರ್ಜುನ, ದೇಹವನ್ನು ಅಲುಗಾಡಿಸುತ್ತಿತ್ತು. ಪ್ರಾಣಿಗಳ ಗುಣ ಸ್ವಭಾವ ಅರಿಯದ ಸಾರ್ವಜನಿಕರು ಫೋಟೊ ತೆಗೆಯಲು ಮುಂದಾಗುತ್ತಲೇ ಇದ್ದರು. ಈ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿಯೇ ಸೂಚನೆ ನೀಡಬೇಕಾದ ಅಗತ್ಯವಿತ್ತು.

ಗಜಪಡೆಯು ಫೋಟೊ ಫ್ಲ್ಯಾಷ್‌ನಿಂದ ಬೆದರಿ ಒಂದು ವೇಳೆ ದಿಕ್ಕಾಪಾಲಾಗಿ ಓಡಿದ್ದಿದ್ದರೆ ಅನಾಹುತ ಆಗುತ್ತಿತ್ತು. ಮೆರವಣಿಗೆ ವೇಳೆ ಆನೆಗಳ ಫೋಟೊ ತೆಗೆಯುವುದನ್ನು ನಿರ್ಬಂಧಿಸಿ.

ADVERTISEMENT

–ಎಂ.ಎಸ್.ಉಷಾ ಪ್ರಕಾಶ,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.