ಬೆಂಗಳೂರು: ವೃಂದಾ ದಿನೇಶ್ ಅವರು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ಟೂರ್ನಿಯು ಡಿ.10ರಿಂದ 19ರವರೆಗೆ ರಾಯಪುರದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು 15 ಆಟಗಾರ್ತಿಯರನ್ನು ಒಳಗೊಂಡ ಕರ್ನಾಟಕ ತಂಡವನ್ನು ಭಾನುವಾರ ಪ್ರಕಟಿಸಿದೆ.
ತಂಡ ಹೀಗಿದೆ: ವೃಂದಾ ದಿನೇಶ್ (ನಾಯಕಿ), ನಿಕಿ ಪ್ರಸಾದ್, ಶ್ರೇಯಾಂಕಾ ಆರ್. ಪಾಟೀಲ, ಜಿ.ಆರ್. ಪ್ರೇರಣಾ, ರೋಶಿನಿ ಕಿರಣ್, ಕೃಷಿಕಾ ರೆಡ್ಡಿ, ಚಾಂದಸಿ ಕೃಷ್ಣಮೂರ್ತಿ, ಸೌಮ್ಯ ವರ್ಮಾ (ವಿಕೆಟ್ ಕೀಪರ್), ಮಿಥಿಲಾ ವಿನೋದ್, ಅದಿತಿ ರಾಜೇಶ್, ಸಾಕ್ಷಿ ದೋಯಿಜೋಡೆ (ವಿಕೆಟ್ ಕೀಪರ್), ಅದಿತಿ ಬಕ್ಕ, ಶಿಶಿರಾ ಎ. ಗೌಡ, ಎಂ. ಪೂಜಾ ಕುಮಾರಿ, ಅನನ್ಯಾ ಹೆಗ್ಡೆ.
ಕರುಣಾ ಜೈನ್ (ಕೋಚ್), ರಂಜಿನಿಕುಮಾರ್ (ಮ್ಯಾನೇಜರ್), ಇಶಿತಾ ಕುಲಕರ್ಣಿ (ಫಿಸಿಯೋಥೆರಪಿಸ್ಟ್), ಎಸ್. ಕೃತಿ, ಮಾಲಾ ರಂಗಸ್ವಾಮಿ (ವಿಡಿಯೊ ಅನಾಲಿಸ್ಟ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.