ADVERTISEMENT

ಬಿಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕ ತಂಡಕ್ಕೆ ಧೀರಜ್‌ ನಾಯಕ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:24 IST
Last Updated 21 ಅಕ್ಟೋಬರ್ 2024, 15:24 IST
ಧೀರಜ್‌ ಜೆ. ಗೌಡ
ಧೀರಜ್‌ ಜೆ. ಗೌಡ   

ಬೆಂಗಳೂರು: ಧೀರಜ್‌ ಜೆ. ಗೌಡ ಅವರು ಬಿಸಿಸಿಐ ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಬರೋಡಾ ಮತ್ತು ದೆಹಲಿ ವಿರುದ್ಧದ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡವು ನ.6ರಿಂದ 9ರವರೆಗೆ ಬರೋಡಾ ತಂಡವನ್ನು, ನ.13ರಿಂದ 16 ರವರೆಗೆ ದೆಹಲಿಯನ್ನು ಎದುರಿಲಿಸಲಿದೆ. ಈ ಪಂದ್ಯಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸೋಮವಾರ ತಂಡವನ್ನು ಪ್ರಕಟಿಸಿದೆ. ಭಾರತ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಅವರಿಗೆ ಉಪನಾಯಕನ ಹೊಣೆ ನೀಡಲಾಗಿದೆ.

ತಂಡ ಹೀಗಿದೆ: ಧೀರಜ್‌ ಜೆ. ಗೌಡ (ನಾಯಕ), ಸಮಿತ್ ದ್ರಾವಿಡ್ (ಉಪನಾಯಕ), ಶಿವಂ ಸಿಂಗ್, ಪ್ರಣವ್ ಬಾಬು, ರವಿ ಕೈರವ್ ರೆಡ್ಡಿ (ವಿಕೆಟ್‌ ಕೀಪರ್‌), ಕಾರ್ತಿಕೇಯ ಕೆ.ಪಿ, ಸಿದ್ಧಾರ್ಥ್ ಅಖಿಲ್, ಸಮರ್ಥ್ ನಾಗರಾಜ್, ವೈಭವ್ ಶರ್ಮಾ, ಪ್ರಥಮ್ ಆರ್, ರಾಗ್ ಪೂಂಜಾ, ಗೌರವ್ ಶಾನ್‌ಭಾಗ್, ಸೀನ್ ಪ್ರತ್ಯೂಷ್ ಸಿರಿಲ್ (ವಿಕೆಟ್‌ ಕೀಪರ್‌), ಸನ್ಮಯ್ ರುದ್ರವಾಡಿ, ರೋಣಿತ್ ಅಯ್ಯಂಗಾರ್.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.