ADVERTISEMENT

ಕ್ರಿಕೆಟ್ | ಮಂಡಿ ನೋವಿನಿಂದ ಪಂದ್ಯ ಕಳೆದುಕೊಂಡ ಸಮಿತ್ ದ್ರಾವಿಡ್‌

ಪಿಟಿಐ
Published 30 ಸೆಪ್ಟೆಂಬರ್ 2024, 13:37 IST
Last Updated 30 ಸೆಪ್ಟೆಂಬರ್ 2024, 13:37 IST
ಸಮಿತ್ ದ್ರಾವಿಡ್
ಸಮಿತ್ ದ್ರಾವಿಡ್   

ಚೆನ್ನೈ: ಮೊಣಕಾಲಿನ ನೋವಿನಿಂದಾಗಿ ಕರ್ನಾಟಕದ ಸಮಿತ್ ದ್ರಾವಿಡ್‌, ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 19 ವರ್ಷದೊಳಗಿನವರ ಮೊದಲ ‘ಅನಧಿಕೃತ’ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಕಳೆದುಕೊಂಡರು. ಅವರು ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆಯೂ ಕ್ಷೀಣವಾಗಿದೆ.

ಮೊದಲ ಪಂದ್ಯ ಸೋಮವಾರ ಇಲ್ಲಿ ಆರಂಭವಾಗಿದೆ. ಸಮಿತ್, ಪುದುಚೇರಿಯಲ್ಲಿ ನಡೆದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿತ್ತು. ಆದರೆ ಅವರು ಯಾವುದೇ ಪಂದ್ಯದಲ್ಲಿ ಆಡಲಿಲ್ಲ. ಭಾರತ ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತ್ತು.

‘ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಅವರು ಸದ್ಯ ಅವರು ಎನ್‌ಸಿಎನಲ್ಲಿದ್ದಾರೆ’ ಎಂದು ಮುಖ್ಯ ಕೋಚ್‌ ಹೃಷಿಕೇಶ್‌ ಕಾನಿಟ್ಕರ್ ತಿಳಿಸಿರುವುದಾಗಿ ಇಎಸ್‌ಪಿಎಲ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ. ಇದು ಅವರಿಗೆ 19 ವರ್ಷದೊಳಗಿನವರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಕೊನೆಯ ಅವಕಾಶವಾಗಿದೆ. ಅಕ್ಟೋಬರ್ 11ರಂದು ಅವರು 19 ವರ್ಷಕ್ಕೆ ಕಾಲಿಡಲಿದ್ದಾರೆ.

ADVERTISEMENT

ಸಮಿತ್ ಅವರು ಭಾರತ ತಂಡದ ಮಾಜಿ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್‌ ಅವರ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.