ADVERTISEMENT

PHOTOS | ಟೀಮ್ ಇಂಡಿಯಾ ವಿಜಯೋತ್ಸವ; ಮುಂಬೈಯಲ್ಲಿ ಹಬ್ಬ, ಅಭಿಮಾನಿಗಳ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2024, 2:40 IST
Last Updated 5 ಜುಲೈ 2024, 2:40 IST
<div class="paragraphs"><p>ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ&nbsp;ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ&nbsp;ಮುಂಬೈನಲ್ಲಿ  ಅಭೂತಪೂರ್ವ ಸ್ವಾಗತ ಕೋರಲಾಯಿತು</p></div>

ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಮುಂಬೈನಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು

   

ಚಿತ್ರ ಕೃಪೆ: ಎಕ್ಸ್‌

ಭಾರತ ತಂಡದ ಆಟಗಾರರನ್ನು ನೋಡಲು ಕಾತುರದಿಂದ ಕಿಕ್ಕಿರಿದು ಸೇರಿರುವ ಲಕ್ಷಾಂತರ ಅಭಿಮಾನಿಗಳು

ADVERTISEMENT

ನರೀಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್‌ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ನೆರೆದಿರುವ ಅಭಿಮಾನಿಗಳು

ಬಾರ್ಬಡೋಸ್‌ನಿಂದ ನವದೆಹಲಿಗೆ ಬಂದಿಳಿದ ಭಾರತ ತಂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರ ಆತಿಥ್ಯ ಸ್ವೀಕರಿಸಿದರು

ಟೀಂ ಇಂಡಿಯಾ ಆಟಗಾರರ ಜೊತೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಆಟಗಾರರನ್ನು ಅಭಿನಂದಿಸಿದರು.

ಟಿ20 ವಿಶ್ವಕಪ್‌ನ ಟ್ರೋಫಿಯೊಂದಿಗೆ ಮುಂಬೈನ ವಾಂಖೆಡೆ ಮೈದಾನಕ್ಕೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು

ವಾಂಖೆಡೆ ಮೈದಾನದಲ್ಲಿ ಗೆದ್ದ ಟಿ20 ವಿಶ್ವಕಪ್‌ ಟ್ರೋಫಿಯನ್ನು ಇಡುತ್ತಿರುವ ನಾಯಕ ರೋಹಿತ್‌ ಶರ್ಮಾ

ವಾಂಖೆಡೆ ಮೈದಾನದಲ್ಲಿ ಟಿ20 ವಿಶ್ವಕಪ್‌ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಆಟಗಾರರು

ಸುರಿಯುತ್ತಿದ್ದ ಮಳೆಯಲ್ಲಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ತೊಯ್ದು ತೊಪ್ಪೆಯಾದರೂ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು  ಕಣ್ತುಂಬಿಕೊಳ್ಳುವ ಕಾತುರದಿಂದ ಕಾಯುತ್ತಿದ್ದ ದೃಶ್ಯ

ಟಿ20 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾಗೆ ₹125 ಕೋಟಿ ಬಹುಮಾನ ನೀಡಿದ ಬಿಸಿಸಿಐ

ವಾಂಖೆಡೆ ಮೈದಾನದಲ್ಲಿ ಸಂಭ್ರಮಿಸಿದ ಬಳಿಕ ತೆರೆದ ಛಾವಣಿಯ ಬಸ್‌ನಲ್ಲಿ ವಿಜಯಯಾತ್ರೆ ಆರಂಭಿಸಿದ ಆಟಗಾರರು

ವಿಜಯಯಾತ್ರೆಯಲ್ಲಿ ವಿಶ್ವಕಪ್‌ ಟ್ರೋಫಿಯೊಂದಿಗೆ ವಿರಾಟ್‌ ಕೊಹ್ಲಿ ಮತ್ತು ಇತರ ಆಟಗಾರರ ಸಂಭ್ರಮದ ಕ್ಷಣ

ವಿಜಯಯಾತ್ರೆಯಲ್ಲಿ ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ನಾಯಕ ರೋಹಿತ್‌ ಶರ್ಮಾ

ವಿಜಯಯಾತ್ರೆಯನ್ನು ಕಣ್ತುಂಬಿಕೊಂಡ ಅಭಿಮಾನಿಗಳು

ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ನಡುವೆ ತೆರೆದ ಛಾವಣಿಯ ಬಸ್‌ನಲ್ಲಿ ವಿಜಯಯಾತ್ರೆ ನಡೆಸಿ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದ ಖುಷಿಯನ್ನು ಸಂಭ್ರಮಿಸಿದ ಆಟಗಾರರು

ವಾಂಖೆಡೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.