ADVERTISEMENT

ಟಿ20 ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ಸಿರಾಜ್‌ಗೆ ಸರ್ಕಾರಿ ನೌಕರಿ, ನಿವೇಶನ

ಪಿಟಿಐ
Published 9 ಜುಲೈ 2024, 13:32 IST
Last Updated 9 ಜುಲೈ 2024, 13:32 IST
<div class="paragraphs"><p> ಮೊಹಮ್ಮದ್‌ ಸಿರಾಜ್‌ ( ಸಂಗ್ರಹ ಚಿತ್ರ )</p></div>

ಮೊಹಮ್ಮದ್‌ ಸಿರಾಜ್‌ ( ಸಂಗ್ರಹ ಚಿತ್ರ )

   

ಹೈದರಾಬಾದ್: ಭಾರತ ಕ್ರಿಕೆಟ್‌ ತಂಡದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರು ಟಿ20 ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನವನ್ನು ಶ್ಲಾಘಿಸಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ದಿ, ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಬಹುಮಾನವಾಗಿ ಘೋಷಿಸಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ ಅನ್ನು ಭಾರತ ಕ್ರಿಕೆಟ್‌ ತಂಡ ಮುಡಿಗೇರಿಸಿಕೊಂಡಿತು. ತವರಿಗೆ ಮರಳಿದ ಬಳಿಕ ಸಿರಾಜ್‌ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಿರಾಜ್‌ ಅವರನ್ನು ರೆಡ್ಡಿ ಸನ್ಮಾನಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿರಾಜ್‌ ನೀಡಿದ ಉತ್ತಮ ಪ್ರದರ್ಶನ ಕುರಿತು ರೆಡ್ಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಹೈದರಾಬಾದ್‌ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂಕ್ತವಾದ ನಿವೇಶನ ಗುರುತಿಸಿ, ಅವರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.