ಬೆಂಗಳೂರು: ತೇಜಸ್ ರಾಜಶೇಖರ್ ಪವಾರ್ ಅವರು ಇದೇ 23ರಿಂದ ಅ.3ರವರೆಗೆ ಚಂಡೀಗಢದಲ್ಲಿ ನಡೆಯುವ 14ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕರ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ 18 ಆಟಗಾರರ ತಂಡವನ್ನು ಹಾಕಿ ಕರ್ನಾಟಕ ಗುರುವಾರ ಪ್ರಕಟಿಸಿದೆ. ಕರ್ನಾಟಕವು ಪಂಜಾಬ್, ಬಿಹಾರ ಮತ್ತು ಮಣಿಪುರ ತಂಡಗಳೊಂದಿಗೆ ‘ಇ’ ಗುಂಪಿನಲ್ಲಿದೆ.
ತಂಡ ಹೀಗಿದೆ: ತೇಜಸ್ ರಾಜಶೇಖರ್ ಪವಾರ್ (ನಾಯಕ), ಆರ್ಯನ್ ಅಯ್ಯಪ್ಪ, ಸಮರ್ತ್ ನಾಯಕ ಕೆ.ಎಸ್., ಭಗತ್ ಗೌಡ, ಮಲ್ಲು ಸುಣಗಾರ್, ವೀರೇಶ್ ಎಸ್, ಆಕಾಶ್ ರೆಡ್ಡಿ, ಮಂಜೀತ್, ಸಮೀರ್, ಪವನಕುಮಾರ್ ಎಂ. ರಾಥೋಡ್, ರೋಹಿತ್ ಕಾಖಂಡಕಿ, ತನೀಶ್ ತಮ್ಮಯ್ಯ, ದೀಕ್ಷಿತ್ ಎಚ್.ಎಚ್, ಸುಪ್ರೀತ್ ಜಿ, ಜಶನ್ ತಮ್ಮಯ್ಯ ಎಂ.ಸಿ, ನಿಶಾಂತ್ ಎಂ, ಬಿನ್ ಬೋಪಣ್ಣ ಜಿ.ಎನ್ ಮತ್ತು ನಿತೀಶ್ ಶರ್ಮಾ; ಕೋಚ್– ಷಣ್ಮುಖಂ ಪಿ, ಮ್ಯಾನೇಜರ್– ಕೃಷ್ಣ ರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.