ಬೆಂಗಳೂರು: ಶಿವಾಜಿ ಪಿ.ಎಂ ಅವರು ಬಿಹಾರದ ಗಯಾದಲ್ಲಿ ಸೋಮವಾರ ನಡೆದ 58ನೇ ರಾಷ್ಟ್ರೀಯ ಕ್ರಾಸ್ಕಂಟ್ರಿ ಓಟದ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಜಯಿಸಿದರು.
ಇಲ್ಲಿನ ಸೌಂದರ್ಯ ನಿರ್ವಹಣಾಶಾಸ್ತ್ರ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎ ಪದವಿಯ ತೃತೀಯ ಸೆಮಿಸ್ಟರ್ನಲ್ಲಿ ವಿದ್ಯಾರ್ಥಿಯಾಗಿರುವ ಶಿವಾಜಿ ಎಂಟು ಕಿಲೋಮೀಟರ್ ದೂರದ ಓಟವನ್ನು 23 ನಿಮಿಷ 40 ಸೆಕೆಂಡುಗಳಲ್ಲಿ ಪೂರೈಸಿ ಗುರಿ ಮುಟ್ಟಿದರು.
ವಿದ್ಯಾರ್ಥಿ ಈ ಸಾಧನೆಗೆ ಕೋಚ್ಗಳಾದ ಮಂಟೂರ್ ಮತ್ತು ವಿಶ್ವನಾಥ್, ದೈಹಿಕ ಶಿಕ್ಷಣ ನಿರ್ದೇಶಕರಾದ ಹರೀಶ್ ಪಿ.ಎಂ, ಸುರೇಶ್ ರೆಡ್ಡಿ ಎಂ.ಎಸ್. ಮಾರ್ಗದರ್ಶನ ನೀಡಿದ್ದಾರೆ ಎಂದು ಕಾಲೇಜಿನ ಸಿಇಒ ಕೀರ್ತನ್ ಕುಮಾರ್ ಎಂ ಮತ್ತು ಪ್ರಾಚಾರ್ಯ ಬಿ.ಎ. ವಾಸು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.