ADVERTISEMENT

ಟೇಬಲ್‌ ಟೆನಿಸ್‌: ಸಾತ್ವಿಕ್‌, ತನಿಷ್ಕಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:45 IST
Last Updated 23 ಜೂನ್ 2024, 16:45 IST
ಪ್ರಶಸ್ತಿ ಪತ್ರದೊಂದಿಗೆ (ಎಡದಿಂದ) ಸುಚೇತ್ ಸಿ. ಧರೆನ್ನವರ್, ಸಾತ್ವಿಕ್‌ ಎಂ, ಸಾಕ್ಷ್ಯಾ ಸಂತೋಷ್‌ ಮತ್ತು ತನಿಷ್ಕಾ ಕಪಿಲ್ ಕಾಲಭೈರವ 
ಪ್ರಶಸ್ತಿ ಪತ್ರದೊಂದಿಗೆ (ಎಡದಿಂದ) ಸುಚೇತ್ ಸಿ. ಧರೆನ್ನವರ್, ಸಾತ್ವಿಕ್‌ ಎಂ, ಸಾಕ್ಷ್ಯಾ ಸಂತೋಷ್‌ ಮತ್ತು ತನಿಷ್ಕಾ ಕಪಿಲ್ ಕಾಲಭೈರವ    

ಬೆಂಗಳೂರು: ಸಾತ್ವಿಕ್ ಎಂ. ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ 13 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿಯನ್ನು ಗೆದ್ದುಕೊಂಡರು.

ವಿವಿ ಪುರಂನ ಮ್ಯಾಚ್‌ ಪಾಯಿಂಟ್‌ನಲ್ಲಿ ಭಾನುವಾರ ನಡೆದ ಬಾಲಕರ ಫೈನಲ್‌ನಲ್ಲಿ ಸಾತ್ವಿಕ್‌ 9-11, 11-6, 11-5, 11-4ರಿಂದ ಸಿದ್ಧಾಂತ್‌ ಎಂ. ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಸಾತ್ವಿಕ್‌ ಅವರು ಪ್ರತರ್ದನ್ ವಿಶ್ವನಾಥ್ ವಿರುದ್ಧ; ಸಿದ್ಧಾಂತ್‌ ಅವರು ಅಭಿನವ್‌ ಪ್ರಸನ್ನ ವಿರುದ್ಧ ಗೆಲುವು ಸಾಧಿಸಿದ್ದರು.

ಬಾಲಕಿಯರ ಫೈನಲ್‌ನಲ್ಲಿ ತನಿಷ್ಕಾ ಅವರು 12-10, 11-4, 11-3ರಿಂದ ಸಾಕ್ಷ್ಯಾ ಸಂತೋಷ್‌ ಅವರನ್ನು ಮಣಿಸಿದರು. ತನಿಷ್ಕಾಗೆ ಇದು ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯಾಗಿದೆ. ಅವರು 15 ವರ್ಷದೊಳಗಿನವರ ವಿಭಾಗದಲ್ಲೂ ಚಾಂಪಿಯನ್‌ ಆಗಿದ್ದರು. ಸೆಮಿಫೈನಲ್‌ನಲ್ಲಿ ತನಿಷ್ಕಾ ಅವರು ಮಿಹಿಕಾ ಆರ್. ಉಡುಪ ಅವರನ್ನು; ಸಾಕ್ಷ್ಯಾ ಅವರು ದೀಕ್ಷಿತಾ ಪಿ.ನಾಯ್ಕ್ ಅವರನ್ನು ಮಣಿಸಿದ್ದರು.

ADVERTISEMENT

ಹೋಪ್ಸ್‌ ಬಾಲಕಿಯರ ವಿಭಾಗದಲ್ಲಿ ಸಾಕ್ಷ್ಯಾ ಸಂತೋಷ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅವರು ಫೈನಲ್‌ನಲ್ಲಿ 11-8, 11-5, 11-4ರಿಂದ ಧನ್ವಿತಾ ಗಿರೀಶ್‌ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸಾಕ್ಷ್ಯಾ ಅವರು ಸೃಷ್ಟಿ ಧರಿವಾಲ್ ಅವರನ್ನು; ಧನ್ವಿತಾ ಅವರು ಆಧ್ಯಾ ಅವರನ್ನು ಮಣಿಸಿದ್ದರು.

ಹೋಪ್ಸ್‌ ಬಾಲಕರ ವಿಭಾಗದ ಪ್ರಶಸ್ತಿಯನ್ನು ಸುಚೇತ್ ಸಿ. ಧರೆನ್ನವರ್ ಗೆದ್ದುಕೊಂಡರು. ಅವರು ಫೈನಲ್‌ನಲ್ಲಿ 12-10, 9-11, 14-12, 11-4ರಿಂದ ಅರ್ನವ್ ಮಿಥುನ್ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಸುಚೇತ್‌ ಅವರು ಶರ್ವಿಲ್ ಕರಂಬೆಳ್ಕರ್ ಅವರನ್ನು; ಅರ್ನವ್‌ ಅವರು ದೀಪಕ್‌ ವಿನಯ್‌ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.