ಹೈದರಾಬಾದ್: ಅರ್ಜುನ್ ದೇಶ್ವಾಲ್ ಅವರ ಅಮೋಘ ರೈಡಿಂಗ್ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ ಭಾನುವಾರ ಶುಭಾರಂಭ ಮಾಡಿತು.
ಲೀಗ್ನ ಐದನೇ ಪಂದ್ಯದಲ್ಲಿ ಜೈಪುರ ತಂಡವು 39–34ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ 21–18ರಿಂದ ಮುನ್ನಡೆ ಗಳಿಸಿದ್ದ ಪ್ಯಾಂಥರ್ಸ್ ತಂಡವು ಉತ್ತರಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು.
ಸೂಪರ್ ಟೆನ್ ಸಾಧನೆ ಮಾಡಿದ ಅರ್ಜುನ್ 15 ಪಾಯಿಂಟ್ಸ್ ಗಳಿಸಿ ಗೆಲುವಿನ ರೂವಾರಿಯಾದರು. ಅವರಿಗೆ ರೈಡರ್ ಅಭಿಜಿತ್ ಮಲಿಕ್ (7) ಸಾಥ್ ನೀಡಿದರು. ವಾರಿಯರ್ಸ್ ಪರ ರೈಡರ್ಗಳಾದ ನಿತಿನ್ ಕುಮಾರ್ ಮತ್ತು ಮಣಿಂದರ್ ಸಿಂಗ್ ಕ್ರಮವಾಗಿ 13 ಮತ್ತು 8 ಅಂಕ ಗಳಿಸಿ ಗಮನ ಸೆಳೆದರು.
ಇಂದಿನ ಪಂದ್ಯಗಳು
ಯುಪಿ ಯೋಧಾಸ್– ದಬಾಂಗ್ ಡೆಲ್ಲಿ (ರಾತ್ರಿ 8)
ಪುಣೇರಿ ಪಲ್ಟನ್– ಪಟ್ನಾ ಪೈರೇಟ್ಸ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.