ಬೆಂಗಳೂರು: ಸಿ.ಎಚ್. ಸಕೀಪ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕರ್ನಾಟಕ ತಂಡವು ಕೆಎಸ್ಎಫ್ಎ 13 ವರ್ಷದೊಳಗಿನ ಬಾಲಕರ ಸಬ್ ಜೂನಿಯರ್ (ಟೈರ್1) ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ 5–1 ಗೋಲುಗಳಿಂದ ಮಣಿಪುರ ತಂಡವನ್ನು ಮಣಿಸಿತು. ಕರ್ನಾಟಕದ ಪರ ಸಕೀಪ್ (8ನೇ, 27ನೇ ಮತ್ತು 65ನೇ ನಿಮಿಷ) ಮೂರು ಗೋಲು ಗಳಿಸಿ ಮಿಂಚಿದರು. ರಿಶಾನ್ ಚೌಧರಿ (44ನೇ) ಮತ್ತು ಅರವಿಂದ್ರಿಯನ್ ಸಂವಾಂಕಿ ಲಾಟೊ (85ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಮಣಿಪುರ ಪರ ಏಕೈಕ ಗೋಲನ್ನು ಖುತೀಫಂ ಮುಕ್ತಾರ್ ರೆಹಮಾನ್ (34ನೇ) ದಾಖಲಿಸಿದರು. ಟೂರ್ನಿಯಲ್ಲಿ ಒಟ್ಟು 14 ತಂಡಗಳು ಸೆಣಸಾಟ ನಡೆಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.