ಗುರುವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಅಧಿಕಾರಿಗಳು ವರ್ಗಾವಣೆಗೆ ಹಣ ಹೊಂದಿಸಿಕೊಳ್ಳಲು ಪರದಾಡುತ್ತಿರುವುದು, ಅವರಿಗೆ ಹಣಕ್ಕಾಗಿ ಒತ್ತಡ ಹಾಕಿದ್ದು ಯಾರು ಎಂಬುದರ ವಿವರ ನೀಡುತ್ತೇನೆ. ತನಿಖೆ ನಡೆಸುತ್ತಾರೆಯೇ? ನನ್ನನ್ನು ಹಿಟ್ ಅನ್ ರನ್ ಎನ್ನುತ್ತೀರಿ. ದಾಖಲೆಗಳನ್ನು ಕೊಟ್ಟ ಮೇಲೆ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾದವರು ಯಾರು’ ಎಂದು ಪ್ರಶ್ನಿಸಿದರು.