ಮಂದಿರದಲ್ಲಿಹನೆ?
ವ್ರತಾಚಾರಿಗಳ ವ್ರತದಲ್ಲಿಹನೆ?
ಪ್ರಭುತ್ವದ ನಡೆಯಲ್ಲಿಹನೆ?
ಸಂಭ್ರಮದ ಅಲೆಯಲ್ಲಿಹನೆ?
ಅಲ್ಲಿ ಇಲ್ಲಿ ಹುಡುಕದೆ
ಹುಡುಕಬೇಕು ನಮ್ಮೊಳಗೆ
ಆಗ ತೋರುವನು
ತಾನಿರುವ ದಾರಿಯನು
ರಾಮನಿರುವುದು
ಶಬರಿಯ ಪ್ರೀತಿಯಲಿ
ಹಸಿವು ನೀಗಿಸುವಲಿ
ಎಲ್ಲರ ಒಳಿತಿನಲಿ
ಸಂದಿಸಬೇಕು ರಾಮನನು
ಬಹುತ್ವದ ಬೆಸುಗೆಯಲಿ
ನಾನತ್ವ ಅಳಿದು
ಅಮರತ್ವ ಪಡೆದು
ರಾಮತ್ವ ನೆಲಸಬೇಕು
ಲೋಕೇಶ ಬೆಕ್ಕಳಲೆ
ಕನ್ನಡ ಉಪನ್ಯಾಸಕರು
ಮೂರನೇ ಕ್ರಾಸ್, ಶಿಂಷಾ ಮಾರ್ಗ,
ಬೆನಕ ಬಡಾವಣೆ,
ಮಂಡ್ಯ: 571403
ಮೊಬೈಲ್: 9164690501
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.