ADVERTISEMENT

ಶಿರಾ: ಕಾಣದ ಚುನಾವಣಾ ಕಾವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:26 IST
Last Updated 26 ಏಪ್ರಿಲ್ 2024, 4:26 IST
   

ಶಿರಾ: ಚಿತ್ರದುರ್ಗ ಲೋಕಸಭೆ ವ್ಯಾಪ್ತಿಯಲ್ಲಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯುತ್ತಿದ್ದರೂ ಚುನಾವಣೆ ಕಾವು ಎಲ್ಲಿಯೂ ಕಾಣುತ್ತಿಲ್ಲ.

ಕಳದ ವಿಧಾನಸಭೆ ಚುನಾವಣೆಯಲ್ಲಿ ಇದ್ದಷ್ಟು ಪ್ರಚಾರದ ಅಬ್ಬರವೂ ಇಲ್ಲದಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕೆಲವರಿಗೆ ಚುನಾವಣೆಗೆ ಯಾರು ಸ್ಪರ್ಧಿಸಿದ್ದಾರೆ ಎನ್ನುವುದೇ ತಿಳಿದಿಲ್ಲ. ಇದುವರೆಗೂ ಮತವನ್ನು ಕೇಳಲು ಯಾರು ಬಂದಿಲ್ಲ.

ADVERTISEMENT

ವಿಧಾನಸಭೆ ವ್ಯಾಪ್ತಿಯ ಕೆಲವು ಕಡೆ ರೋಡ್ ಶೋ ನಡೆಸಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದರೆ, ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಯಾವುದೇ ನಾಯಕರು ಬಂದು ಪ್ರಚಾರ ನಡೆಸಲಿಲ್ಲ. ಶಾಸಕ ಟಿ.ಬಿ.ಜಯಚಂದ್ರ ಅವರೇ ಪ್ರಚಾರದ ಹೊಣೆ ಹೊತ್ತಿದ್ದರು.

ಕೆಆರ್‌ಎಸ್ ಪಕ್ಷದ ಪರವಾಗಿ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ಅವರ ಪಕ್ಷದ ಅಭ್ಯರ್ಥಿ ನರಸಿಂಹರಾಜು ಪರವಾಗಿ ಪ್ರಚಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.