ADVERTISEMENT

ಸಂದರ್ಶನ ನೀಡಿಲ್ಲ: ಮಲ್ಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 20:13 IST
Last Updated 14 ಮಾರ್ಚ್ 2016, 20:13 IST
ಸಂದರ್ಶನ ನೀಡಿಲ್ಲ: ಮಲ್ಯ
ಸಂದರ್ಶನ ನೀಡಿಲ್ಲ: ಮಲ್ಯ   

ನವದೆಹಲಿ (ಪಿಟಿಐ): ಭಾರತಕ್ಕೆ ಮರಳಲು  ‘ಇದು ಸೂಕ್ತ ಸಮಯ ಅಲ್ಲ’ ಎಂದು ಹೇಳಿದ್ದ ಉದ್ಯಮಿ ವಿಜಯ್‌ ಮಲ್ಯ ಅವರು ‘ಸಂಡೇ ಗಾರ್ಡಿಯನ್‌’ ಪತ್ರಿಕೆಯ ಸಂದರ್ಶನದಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದಾರೆ.

‘ಪತ್ರಿಕೆಗೆ ಸಂದರ್ಶನ ನೀಡಿದ್ದೇನೆಂದು ಪ್ರಕಟಿಸಲಾಗಿರುವ ಹೇಳಿಕೆ ನೋಡಿ ಆಘಾತಗೊಂಡಿದ್ದೇನೆ. ನಾನು ಯಾರಿಗೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ’ ಎಂದು ಅವರು ಸೋಮವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ.

ಸಾಲ ಮಾಡಿ ಮರುಪಾವತಿ ಮಾಡದೆ ಅವರು ಮಾರ್ಚ್‌ 2ರಂದೇ ದೇಶ ಬಿಟ್ಟು ಹೋಗಿರುವುದು ವಿವಾದಕ್ಕೆ ಕಾರಣವಾಗಿದೆ.  ಐಡಿಬಿಐ ಬ್ಯಾಂಕಿನಿಂದ ₹900 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ 18ರಂದು ಮುಂಬೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶ ನಾಲಯವು ಸಮನ್ಸ್‌ ಜಾರಿ ಮಾಡಿದೆ.

‘ನಾನು ಭಾರತೀಯ.  ಭಾರತಕ್ಕೆ ಮರಳಬೇಕೆಂದು   ಖಂಡಿತವಾಗಿ ಬಯಸಿದ್ದೇನೆ. ಆದರೆ, ನನ್ನನ್ನು ಸಮರ್ಥಿ ಸಿಕೊಳ್ಳಲು ತಕ್ಕ ಅವಕಾಶ ದೊರೆಯು ವುದೆಂಬ ಭರವಸೆ ಇಲ್ಲ. ಈಗಾಗಲೇ ನನಗೆ ಕ್ರಿಮಿನಲ್‌ ಎಂಬ ಹಣೆಪಟ್ಟಿ ಹಚ್ಚಲಾಗಿದೆ. ಭಾರತಕ್ಕೆ ವಾಪಸಾಗಲು ಇದು ಸರಿಯಾದ ಸಮಯ ಅಲ್ಲ’ ಎಂದು  ಅವರು ಇ–ಮೇಲ್‌ ಸಂದರ್ಶನದಲ್ಲಿ ತಿಳಿಸಿದ್ದಾಗಿ  ‘ಸಂಡೇ ಗಾರ್ಡಿಯನ್‌’ ವರದಿ ಮಾಡಿತ್ತು. ಈ ಮಧ್ಯೆ ಸಂದರ್ಶನಕ್ಕೆ ಬದ್ಧವಾಗಿರುವುದಾಗಿ ಪತ್ರಿಕೆ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.