ADVERTISEMENT

‘ಕಚೇರಿಗೆ ಗೈರಾದರೆ ಒಂದು ದಿನದ ವೇತನ ಕಡಿತ’

ಪಿಟಿಐ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST

ಲಖನೌ : ಕಚೇರಿಗೆ ತಡವಾಗಿ ಬರುವ ಹಾಗೂ ಗೈರಾಗುವ ಕೃಷಿ ಇಲಾಖೆಯ ನೌಕರರ ಒಂದು ದಿನದ ವೇತನವನ್ನು ಕಡಿತಗೊಳಿಸಲಾಗುವುದು ಎಂದು ಕೃಷಿ ಸಚಿವ ಸೂರ್ಯ ಪ್ರತಾಪ್‌ ಶಾಹಿ ಹೇಳಿದ್ದಾರೆ.

ಕೃಷಿ ನಿರ್ದೇಶನಾಲಯ ಕಚೇರಿಗೆ ಸಚಿವರು ದಿಢೀರ್‌ ಭೇಟಿ ನೀಡಿದ್ದು, ನೌಕಕರು ಕಚೇರಿಯಲ್ಲಿರದೇ ಇರುವುದರಿಂದ ಕೆರಳಿದ ಅವರು, ‘ರಾಜ್ಯದ ಯೋಗಿ ಸರ್ಕಾರ ಉತ್ತಮ ಕೆಲಸ ಸಂಸ್ಕೃತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬರಬೇಕಾಯಿತು’ ಎಂದು ಹೇಳಿದರು.  

‘ಕೆಲವು ತಿಂಗಳ ಹಿಂದೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ್ದೆ. ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡಿದ್ದೆ. ಆದರೂ, ಕೆಲವು ನೌಕರರು ಕಚೇರಿಗೆ ಗೈರಾಗಿದ್ದಾರೆ. ಇವರ ವಿವರಗಳನ್ನು ಪರಿಶೀಲಿಸಿ ಒಂದು ದಿನದ ವೇತನವನ್ನು ಕಡಿತ ಮಾಡಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.