ಬೆಂಗಳೂರು: ಖ್ಯಾತ ರಂಗಕರ್ಮಿ ಸಿ.ಆರ್.ಸಿಂಹ ಅವರ ಸ್ಮರಣಾರ್ಥ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏ.22ರ ಸಂಜೆ ಆರು ಗಂಟೆಗೆ ‘ನಮ್ಮ ಸಿಮ್ಮ– ರಂಗಭೂಮಿ ಸಿಂಹ’ ಎಂಬ ಕಾರ್ಯಕ್ರಮ ನಡೆಯಲಿದೆ.
ನಟರಂಗ ವೇದಿಕೆ, ಸ್ಪಂದನಾ ಹಾಗೂ ರಂಗ ನಿರಂತರದ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಿ.ಆರ್.ಸಿಂಹ ಅವರ ನಿರ್ದೇಶನದ ನಾಟಕಗಳ ಆಯ್ದ ಗೀತೆಗಳು ಹಾಗೂ ವಿಡಿಯೊ ತುಣುಕುಗಳನ್ನು ಪ್ರದರ್ಶಿಸಲಾಗುವುದು. ಮಾಹಿತಿಗೆ: 080 2672 4373