<p><strong>ಬೆಂಗಳೂರು: </strong>`ಅಧಿಕಾರಿಗಳ ವಿಳಂಬ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ' ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಎಚ್ಚರಿಕೆ ನೀಡಿದರು.<br /> <br /> ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ದುರುಪಯೋಗ ಪ್ರವೃತ್ತಿ ಮುಂದುವರೆದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳು ಮಣ್ಣುಪಾಲಾಗುತ್ತವೆ. ನೀವು (ಸಚಿವಾಲಯದ ಅಧಿಕಾರಿಗಳು) ಆಡಳಿತ ವ್ಯವಸ್ಥೆಯ ನರ ಮಂಡಲದಲ್ಲಿದ್ದೀರಿ. ಇಲ್ಲಿ ಸರಿಹೋದರೆ ದೇಶದ ಆಡಳಿತ ಸರಿ ಹೋಗುತ್ತದೆ' ಎಂದು ಅವರು ಮಾರ್ಮಿಕವಾಗಿ ಹೇಳಿದರು.<br /> <br /> `ತಮ್ಮ ಸಹೋದರ, ಸಹೋದರಿಯರ ಜತೆಗೇ ಅಧಿಕಾರಿಗಳು ಅಧಿಕಾರ ಮದದಿಂದ ವರ್ತಿಸುವುದು ಅಕ್ಷಮ್ಯ. ಅಧಿಕಾರಿಗಳು ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಯಾವುದೇ ಕಾರ್ಯವಾದರೂ ವಿಳಂಬ ಮಾಡಬಾರದು. ವಿಳಂಬವು ವಿಷವಿದ್ದಂತೆ' ಎಂದು ಅವರು ನುಡಿದರು.<br /> <br /> `1947ರಲ್ಲಿ ದೇಶದ ಮೊದಲ ಬಜೆಟ್ ಮಂಡಿಸಿದಾಗರೂಒಂದು ಕೋಟಿ ವಿತ್ತೀಯ ಕೊರತೆ ಇತ್ತು. ಆಗ ಅದೇ ದೊಡ್ಡ ಕೊರತೆ ಎಂದು ಕೂಗೆಬ್ಬಿಸಲಾಯಿತು. 2012- 13ರಲ್ಲಿ ವಿತ್ತೀಯ ಕೊರತೆರೂ 6 ಲಕ್ಷ ಕೋಟಿಗಳಷ್ಟಿದೆ' ಎಂದು ಅವರು ಹೇಳಿದರು.<br /> <br /> ಸಂಘದ ಅಧ್ಯಕ್ಷ ಎಸ್.ಎನ್.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿ.ಡಿ.ಓಬಪ್ಪ, ಕಾರ್ಯದರ್ಶಿ ಎಚ್.ರಾಜ್ಕುಮಾರ್, ಖಜಾಂಚಿ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.</p>.<p><strong>`ಕನ್ನಡದಲ್ಲಿ ಆಡಳಿತಕ್ಕೆ ಮನಸ್ಸು ಮಾಡಿ'</strong></p>.<p>`ಕನ್ನಡ ಭಾಷೆಯನ್ನು ಕಾಪಾಡಬೇಕಾದವರು ನೀವು. ನೀವು ಮನಸ್ಸು ಮಾಡಿದರೆ ಆಡಳಿತ ಭಾಷೆಯಾಗಿ ಕನ್ನಡ ಅನುಷ್ಠಾನಗೊಳ್ಳಲಿದೆ. ದಯವಿಟ್ಟು ಮನಸ್ಸು ಮಾಡಿ' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸಚಿವಾಲಯದ ಅಧಿಕಾರಿಗಳಲ್ಲಿ ಮನವಿ ಮಾಡಿದರು.<br /> <br /> `ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸಲು ಇದುವರೆಗೆ 200 ಸರ್ಕಾರಿ ಆದೇಶಗಳು ಹೊರಬಿದ್ದಿವೆ. ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೊಂದಿಲ್ಲ' ಎಂದು ಅವರು ವಿಷಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಅಧಿಕಾರಿಗಳ ವಿಳಂಬ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ' ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಎಚ್ಚರಿಕೆ ನೀಡಿದರು.<br /> <br /> ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ದುರುಪಯೋಗ ಪ್ರವೃತ್ತಿ ಮುಂದುವರೆದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳು ಮಣ್ಣುಪಾಲಾಗುತ್ತವೆ. ನೀವು (ಸಚಿವಾಲಯದ ಅಧಿಕಾರಿಗಳು) ಆಡಳಿತ ವ್ಯವಸ್ಥೆಯ ನರ ಮಂಡಲದಲ್ಲಿದ್ದೀರಿ. ಇಲ್ಲಿ ಸರಿಹೋದರೆ ದೇಶದ ಆಡಳಿತ ಸರಿ ಹೋಗುತ್ತದೆ' ಎಂದು ಅವರು ಮಾರ್ಮಿಕವಾಗಿ ಹೇಳಿದರು.<br /> <br /> `ತಮ್ಮ ಸಹೋದರ, ಸಹೋದರಿಯರ ಜತೆಗೇ ಅಧಿಕಾರಿಗಳು ಅಧಿಕಾರ ಮದದಿಂದ ವರ್ತಿಸುವುದು ಅಕ್ಷಮ್ಯ. ಅಧಿಕಾರಿಗಳು ತ್ವರಿತಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಯಾವುದೇ ಕಾರ್ಯವಾದರೂ ವಿಳಂಬ ಮಾಡಬಾರದು. ವಿಳಂಬವು ವಿಷವಿದ್ದಂತೆ' ಎಂದು ಅವರು ನುಡಿದರು.<br /> <br /> `1947ರಲ್ಲಿ ದೇಶದ ಮೊದಲ ಬಜೆಟ್ ಮಂಡಿಸಿದಾಗರೂಒಂದು ಕೋಟಿ ವಿತ್ತೀಯ ಕೊರತೆ ಇತ್ತು. ಆಗ ಅದೇ ದೊಡ್ಡ ಕೊರತೆ ಎಂದು ಕೂಗೆಬ್ಬಿಸಲಾಯಿತು. 2012- 13ರಲ್ಲಿ ವಿತ್ತೀಯ ಕೊರತೆರೂ 6 ಲಕ್ಷ ಕೋಟಿಗಳಷ್ಟಿದೆ' ಎಂದು ಅವರು ಹೇಳಿದರು.<br /> <br /> ಸಂಘದ ಅಧ್ಯಕ್ಷ ಎಸ್.ಎನ್.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿ.ಡಿ.ಓಬಪ್ಪ, ಕಾರ್ಯದರ್ಶಿ ಎಚ್.ರಾಜ್ಕುಮಾರ್, ಖಜಾಂಚಿ ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.</p>.<p><strong>`ಕನ್ನಡದಲ್ಲಿ ಆಡಳಿತಕ್ಕೆ ಮನಸ್ಸು ಮಾಡಿ'</strong></p>.<p>`ಕನ್ನಡ ಭಾಷೆಯನ್ನು ಕಾಪಾಡಬೇಕಾದವರು ನೀವು. ನೀವು ಮನಸ್ಸು ಮಾಡಿದರೆ ಆಡಳಿತ ಭಾಷೆಯಾಗಿ ಕನ್ನಡ ಅನುಷ್ಠಾನಗೊಳ್ಳಲಿದೆ. ದಯವಿಟ್ಟು ಮನಸ್ಸು ಮಾಡಿ' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸಚಿವಾಲಯದ ಅಧಿಕಾರಿಗಳಲ್ಲಿ ಮನವಿ ಮಾಡಿದರು.<br /> <br /> `ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸಲು ಇದುವರೆಗೆ 200 ಸರ್ಕಾರಿ ಆದೇಶಗಳು ಹೊರಬಿದ್ದಿವೆ. ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೊಂದಿಲ್ಲ' ಎಂದು ಅವರು ವಿಷಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>