ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಕಚೇರಿಗೆ ತೆರಳಿದ ಅರವಿಂದ ಕೇಜ್ರಿವಾಲ್ ಅವರು ಅಧಿಕಾರ ವಹಿಸಿಕೊಂಡರು.
ನೀಲಿ ಬಣ್ಣದ ಸ್ವೆಟರ್ ಮತ್ತು ‘ಮೈ ಹೂಂ ಆಮ್ ಆದ್ಮಿ, ಮುಝೆ ಚಾಹಿಯೆ ಪೂರ್ಣ ಸ್ವರಾಜ್’ (ನಾನು ಬಡವ, ನನಗೆ ಬೇಕು ಪೂರ್ಣ ಸ್ವರಾಜ್ಯ) ಎಂದು ಮುದ್ರಿತವಾಗಿದ್ದ ಗಾಂಧಿ ಟೋಪಿ ತೊಟ್ಟಿದ್ದ ಕೇಜ್ರಿವಾಲ್ ಅವರು ಕಚೇರಿ ತಲುಪುತ್ತಿದ್ದಂತೆ ಅಧಿಕಾರಿ ವರ್ಗ ಅವರನ್ನು ಬರಮಾಡಿಕೊಂಡಿತು.
‘ಶನಿವಾರ ನಡೆಯಬೇಕಿದ್ದ ಸಚಿವ ಸಂಪುಟದ ಮೊದಲ ಸಭೆ ಕಾರಣಾಂತರಗಳಿಂದ ಸೋಮವಾರಕ್ಕೆ ಮುಂದೂಡಿಕೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.